Advertisement

ಯಾರಿಗೆ ಯಾವ ಖಾತೆ ಅನ್ನೋದು ಅಂತಿಮ ಆಗಿದೆ, ನಾಳೆಯೇ ಹಂಚಿಕೆ: ಬಿಎಸ್ ವೈ

10:02 AM Feb 10, 2020 | keerthan |

ಹುಬ್ಬಳ್ಳಿ: ನೂತನ ಸಚಿವರಿಗೆ ನಾಳೆ ಖಾತೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಯಾರಿಗೆ ಯಾವ ಖಾತೆ ಅನ್ನೋದು ಅಂತಿಮ ಆಗಿದೆ‌ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

Advertisement

ವಿಜಯನಗರ (ಹೊಸಪೇಟೆ) ಹೊಸ ಜಿಲ್ಲೆ ಸ್ಥಾಪನೆಯ ಯಾವುದೇ ಪ್ರಸ್ತಾಪವಿಲ್ಲ. ಆ ಯೋಚನೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಾರ್ಚ್ 5 ರಂದು ಬಜೆಟ್ ಮಂಡನೆಯಾಗಲಿದೆ. ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಬಜೆಟ್ ನಲ್ಲಿ ಸಹಕಾರ ಬ್ಯಾಂಕ್ ಗಳ ರೈತರ ಬಡ್ಡಿ ಹಾಗೂ ಸುಸ್ತಿಬಡ್ಡಿ ಮನ್ನಾ ಮಾಡಲಾಗುವುದು. ಬಡ್ಡಿ ಮನ್ನಾದಿಂದ 400ಕೋಟಿ ರೂಪಾಯಿಗೂ ಅಧಿಕ ಹೊರೆಯಾಗಲಿದೆ ಎಂದರು.

ಮಹದಾಯಿ ವಿಚಾರದ ಬಗ್ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಅದಕ್ಕಾಗಿ ದೆಹಲಿಗೆ ಹೋಗಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವೆ ಎಂದು ಯಡಿಯೂರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next