Advertisement

ಶಬರಿಮಲೆ ವಿವಾದಕ್ಕೆ ಸಚಿವೆ ಕಾರಣ

12:10 PM Dec 10, 2018 | |

ಬೆಂಗಳೂರು: ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡುವ ವಿವಾದದಲ್ಲಿ ಕರ್ನಾಟಕದ ಪಾತ್ರವೂ ಇದೆ. ವಿವಾದದ ಮೂಲ ಕಾರಣೀಕರ್ತರಲ್ಲಿ ಕರ್ನಾಟಕದ ಹಾಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಸೇರಿದ್ದಾರೆ ಎಂದು ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಕಾರ್ಯಕಾರಣಿ ಮಂಡಳಿಯ ಆಹ್ವಾನಿತ ಸದಸ್ಯ ಜೆ.ನಂದಕುಮಾರ್‌ ದೂರಿದರು.

Advertisement

ಶಬರಿಮಲೆ ಅಯ್ಯಪ್ಪ ಸಂರಕ್ಷಣಾ ಸಮಿತಿ ಜಯನಗರದ ರಾಷ್ಟ್ರೋತ್ಥಾನ ಯೋಗ ಮತ್ತು ಫೀಟ್ನೆಸ್‌ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಶಬರಿಮಲೆಯಲ್ಲಿ ಏನು ನಡೆಯುತ್ತಿದೆ’? ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಾಲಿ ಜೆಡಿಎಸ್‌ – ಕಾಂಗ್ರೆಸ್‌ ಸಮಿಶ್ರ ಸರ್ಕಾರದಲ್ಲಿ
ಸಚಿವೆಯೊಬ್ಬರು ಈ ಹಿಂದೆ ಶಬರಿಮಲೆ ವಿವಾದದ ಕೇಂದ್ರ ಬಿಂದುವಾಗಿದ್ದರು ಎಂದು ಟೀಕಿಸಿದರು.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಸರ್ಕಾರ ಶಬರಿಮಲೆ ವಿಚಾರದಲ್ಲಿ ಹಿಂದೂ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಪೋಲಿಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಶಬರಿಮಲೆ ಸಂರಕ್ಷಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ.
ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಮೂಲದ ಐಪಿಎಸ್‌ ಅಧಿಕಾರಿ ಯತೀಶ್‌ಚಂದ್ರ ಕೂಡ ತಮ್ಮ ಎಲ್ಲೆ ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ದಕ್ಷಿಣ ಭಾರತದ ದೇವಾಲಯಗಳಿಗೂ ಬರಬಹುದು: ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಗಳು ಮಧ್ಯಪ್ರವೇಶ ಅಷ್ಟೊಂದು ಸೂಕ್ತವಲ್ಲ. ಈ ಪ್ರವೃತ್ತಿ ಹೀಗೆ ಮುಂದುವರಿದರೆ ಈಗ ಶಬರಿಮಲೆಗೆ ಬಂದಿರುವ ಪರಿಸ್ಥಿತಿ ಮುಂದೆ ದಕ್ಷಿಣ ಭಾರತದ ಹಿಂದೂ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರ ಮೂಕಾಂಬಿಕೆ, ಗುರುವಾಯೂರು, ಅನಂತ ಪದ್ಮನಾಭ ಸ್ವಾಮಿ, ತಿರುಪತಿ ತಿಮ್ಮಪ್ಪ ದೇವಸ್ಥಾಗಳಿಗೂ ಬಂದರೂ ಅಚ್ಚರಿಯೇನಿಲ್ಲ ಎಂದರು.

ಪ್ರಸ್ತಾವಿಕ ಮಾತನಾಡಿದ ಆರ್‌ಎಸ್‌ಎಸ್‌ ಮುಖಂಡ ರಾಜೇಶ್‌ ಪದ್ಮಾರ್‌, ಶಬರಿಮಲೆ ಕ್ಷೇತ್ರದ ಭಕ್ತರ ಮತ್ತು ಅವರ ಭಾವನೆಗಳನ್ನು ಗೌರವಿಸಿ ಬೆಂಬಲಿಸುವ ಸಲುವಾಗಿ ದಕ್ಷಿಣ ಪ್ರಾಂತದ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಅಸ್ಥಿತ್ವಕ್ಕೆ ಬಂದಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next