Advertisement

ಶಾಲಾ ಬಿಸಿಯೂಟ ವ್ಯತ್ಯಯ

02:59 AM Jul 09, 2019 | sudhir |

ಪುತ್ತೂರು: ತಾಲೂಕಿನ ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಅಕ್ಷರ ದಾಸೋಹದ ಸಾಮಗ್ರಿ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣದಿಂದ ಇರುವ ಸಾಮಗ್ರಿಯಲ್ಲಿ ಹೊಂದಾಣಿಕೆಯಿಂದ ಬಿಸಿಯೂಟ ನೀಡಲಾಗುತ್ತಿದೆ.

Advertisement

ಮಾರ್ಚ್‌ ತಿಂಗಳ ಅನಂತರ ಪುತ್ತೂರು ತಾಲೂಕಿನ ಗ್ರಾಮೀಣ ಭಾಗದ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಅಕ್ಷರ ದಾಸೋಹದ ಅಕ್ಕಿ ಬೇಳೆ ಸಹಿತ ಯಾವುದೇ ಆಹಾರ ಸಾಮಗ್ರಿ ಗಳು ಸರಬರಾಜುಗೊಂಡಿಲ್ಲ. ಇದರಿಂದ ಆತಂಕಗೊಂಡಿರುವ ಕೆಲವು ಶಾಲೆಗಳ ಶಿಕ್ಷಕರು, ಮನೆಯಿಂದಲೇ ತಿಂಡಿ ತರುವಂತೆ ಮಕ್ಕಳಿಗೆ ತಿಳಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೆಲವೊಂದು ಶಾಲೆಗಳ ಮುಖ್ಯ ಗುರುಗಳು ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು ಸ್ಥಳೀಯ ಪಡಿತರ ವಿತರಣ ಕೇಂದ್ರಗಳಿಂದ ಹಣ ಕೊಟ್ಟು ಅಕ್ಕಿ ಖರೀದಿ ಮಾಡಿದ್ದಾರೆ. ಇನ್ನು ಕೆಲವು ಶಾಲೆಗಳ ಮುಖ್ಯ ಗುರುಗಳು ಪಕ್ಕದ ಶಾಲೆಗಳಿಂದ ಅಕ್ಕಿ ಎರವಲು ತಂದು ಮಕ್ಕಳ ಬಿಸಿಯೂಟ ವ್ಯವಸ್ಥೆ ಮಾಡಿದ್ದಾರೆ.

ಸರಕಾರ ಮಕ್ಕಳಿಗಾಗಿ ನೀಡುವ ಬಿಸಿಯೂಟದ ಆಹಾರ ಸಾಮಗ್ರಿ ನಾಪತ್ತೆಯಾಗಿರುವುದು ಕೆಲವು ದಿನಗಳ ಹಿಂದೆ ಹಾರಾಡಿ ಪ್ರಾಥಮಿಕ ಶಾಲೆಯಲ್ಲಿ ಬಯಲಾಗಿತ್ತು. ಇಲ್ಲಿ 11 ಚೀಲ ಅಕ್ಕಿ ಮಾಯವಾದ ಘಟನೆ ನಡೆದಿತ್ತು. ಬಿಸಿಯೂಟದ ಆಹಾರ ಸಾಮಗ್ರಿ ಸರಬರಾಜು ಮಾಡುವ ಹೊಣೆ ಹೊತ್ತ ಗುತ್ತಿಗೆದಾರರ ಸಮಸ್ಯೆಯಿಂದ ಈಗ ಮತ್ತೂಂದು ತೊಂದರೆ ಎದುರಾಗಿದೆ.

ಗುತ್ತಿಗೆದಾರರೇ ಹೊಣೆ!

ಪ್ರಾಥಮಿಕ ಶಾಲೆಗಳಿಗೆ ಅಕ್ಕಿ, ಬೇಳೆ, ಎಣ್ಣೆ ಸಹಿತ ಆಹಾರ ಸಾಮಗ್ರಿಗಳ ಸರಬರಾಜನ್ನು ಜಿ.ಪಂ. ವ್ಯಾಪ್ತಿಯಲ್ಲಿ ನಡೆದ ಏಲಂ ಪ್ರಕ್ರಿಯೆಯಲ್ಲಿ ಒಂದು ವರ್ಷದ ಗುತ್ತಿಗೆಗೆ ಕಿಶನ್‌ ಪಡೆದುಕೊಂಡಿದ್ದಾರೆ. ಅವರು ಆಹಾರ ಸಾಮಗ್ರಿಗಳನ್ನು ಸಕಾಲದಲ್ಲಿ ಶಾಲೆಗಳಿಗೆ ಸರಬರಾಜು ಮಾಡಿಲ್ಲ. ಈ ಕಾರಣದಿಂದ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆಗೆ ಅವರೇ ಹೊಣೆ ಎನ್ನುತ್ತಾರೆ ಅಕ್ಷರ ದಾಸೋಹದ ಅಧಿಕಾರಿಗಳು.
Advertisement
Advertisement

Udayavani is now on Telegram. Click here to join our channel and stay updated with the latest news.

Next