Advertisement

ತಂದೆ ಮನೆಗೆಂದು ಹೋದ ವ್ಯಕ್ತಿ ನಾಪತ್ತೆ

08:32 PM Mar 31, 2023 | Team Udayavani |

ಕಾರ್ಕಳ: ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ನಿವಾಸಿ ಉದಯ ಕುಮಾರ್‌ (38) ಎಂಬವರು ನಾಪತ್ತೆಯಾದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅನಾರೋಗ್ಯದಲ್ಲಿದ್ದ ತಮ್ಮ ತಂದೆಯವರ ಆರೈಕೆಗೆಂದು ತಂದೆಯ ಮನೆಯಾದ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿಗೆ ಹೋಗಿದ್ದರು. ಅಲ್ಲಿದ್ದ ವೇಳೆ ಅವರು ಪ್ರತಿ ದಿನ ತಾವು ವಾಸವಿದ್ದ ಜಾರಿಗೆಕಟ್ಟೆ ಮನೆಗೆ ಕರೆ ಮಾಡಿ ಮಾತನಾಡುತ್ತಿದ್ದರು. ಕಳೆದ 8 ದಿನಗಳಿಂದ ಪೋನ್‌ ಕರೆಯನ್ನು ಸ್ವೀಕರಿಸದೆ ಇದ್ದುದನ್ನು ಕಂಡು ಮನೆಯವರು ಬೇಲಾಡಿಗೆ ಹೋಗಿ ಮನೆಯವರಲ್ಲಿ ವಿಚಾರಿಸಿದಾಗ ಉದಯ ಕುಮಾರ್‌ ಮಾ. 25ರಂದು ಮಧ್ಯಾಹ್ನ 2ಕ್ಕೆ ಕಾರ್ಕಳಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದಾರೆ ಎಂದಿದ್ದು ಅತ್ತ ತಂದೆ ಮನೆಗೆ ವಾಪಸ್ಸಾಗದೆ, ಇತ್ತ ವಾಸವಿದ್ದ ಮನೆಗೂ ಬಾರದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next