Advertisement

Uppunda ಏಡಿ ಹಿಡಿಯಲು ಹೋದ ವ್ಯಕ್ತಿ ಸಾವು

08:47 PM Dec 19, 2023 | Team Udayavani |

ಉಪ್ಪುಂದ: ಏಡಿ ಹಿಡಿಯಲು ಹೋದ ವ್ಯಕ್ತಿ ಕುಸಿದು ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.17ರಂದು ಉಪ್ಪುಂದದಲ್ಲಿ ನಡೆದಿದೆ.

Advertisement

ಮಾಧವ (56) ಮೃತ ದುರ್ದೈವಿ. ಉಪ್ಪುಂದ ಗ್ರಾಮದ ಓಲಗಮಂಟಪ ಸಮೀಪ ಸುಮನಾವತಿ ನದಿಗೆ ಏಡಿ ಹಿಡಿಯಲೆಂದು ರಾತ್ರಿ 8.30ರ ಸುಮಾರಿಗೆ ದೋಣಿಯಲ್ಲಿ ಹೋಗಿದ್ದು ಏಡಿ ಹಿಡಿಯುತ್ತಿರುವ ಸಂದರ್ಭ ದೋಣಿಯಿಂದ ಕುಸಿದು ನದಿಗೆ ಬಿದ್ದಿದ್ದರು.

ಸ್ಥಳೀಯರಾದ ನಾಗೇಂದ್ರ ಮತ್ತು ಗಂಗಾಧರ ಅವರ ಸಹಾಯದಿಂದ ಅವರನ್ನು ನದಿಯಿಂದ ಮೇಲಕ್ಕೆತ್ತಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next