Advertisement

ಚರಂಡಿಗೆ ಬಿದ್ದ ವ್ಯಕ್ತಿಗೆ ಕಡಬ ಪೊಲೀಸರಿಂದ ಉಪಚಾರ

11:23 PM Feb 22, 2020 | Team Udayavani |

ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜದಲ್ಲಿ ಶನಿವಾರ ಚರಂಡಿಗೆ ಬಿದ್ದು ಗಾಯಗೊಂಡಿದ್ದ ರಾಮಕುಂಜ ಗ್ರಾಮದ ಶಾರದಾನಗರ ಕಾಲನಿಯ ನಿವಾಸಿ ರಮೇಶ್‌ (30) ಅವರನ್ನು ಕಡಬ ಪೊಲೀಸರು ರಕ್ಷಿಸಿದ್ದಾರೆ.

Advertisement

ಆ ಮಾರ್ಗವಾಗಿ ಹೋಗುತ್ತಿದ್ದ ಕಡಬ ಎಸ್‌ಐ ರುಕ್ಮ ನಾಯ್ಕ, ಸಿಬಂದಿ ಕನಕರಾಜ್‌ ಮತ್ತು ಭವಿತ್‌ ರೈ ಅವರು ರಾಮಕುಂಜದ ಆತೂರಿನಲ್ಲಿ ಚರಂಡಿಗೆ ಬಿದ್ದು ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ್ದು, ಕೂಡಲೇ ವಾಹನ ನಿಲ್ಲಿಸಿ ಆತನನ್ನು ಚರಂಡಿಯಿಂದ ಮೇಲಕ್ಕೆತ್ತಿ ಉಪಚರಿಸಿದರು. ಸ್ಥಳೀಯರು ಕೂಡ ಕೈಜೋಡಿಸಿದರು.

ಗಾಯಾಳುವಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆ್ಯಂಬುಲೆನ್ಸ್‌ನಲ್ಲಿ ಪುತ್ತೂರು ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ರಮೇಶ ಅಪಸ್ಮಾರ ರೋಗಿಯಾಗಿದ್ದು, ಕುಡಿತದ ಚಟವನ್ನೂ ಹೊಂದಿದ್ದರು ಎನ್ನಲಾಗಿದೆ. ಆತ ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಿತ್ರಾಣಗೊಂಡು ಚರಂಡಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next