Advertisement

ಸೋದರನ ಮೃತದೇಹ ಸೈಕಲ್‌ನಲ್ಲಿ ಕಟ್ಟಿ ಸಾಗಿಸಿದ!

03:45 AM Apr 20, 2017 | Team Udayavani |

ಗುವಾಹಟಿ: ಮೃತ ಪತ್ನಿಯ ದೇಹ ಹೊತ್ತು ಅಂತ್ಯಸಂಸ್ಕಾರಕ್ಕೆ ಕಿಲೋಮೀಟರ್‌ ಗಟ್ಟಲೆ ನಡೆದ ಪತಿಯ ಸುದ್ದಿ ಒಡಿಶಾದಲ್ಲಿ ವರದಿಯಾದ್ದು ಮರೆವ ಮುನ್ನವೇ, ಅಂಥದ್ದೇ ಒಂದು ಘಟನೆ ಅಸ್ಸಾಂ ಸಿಎಂ ತವರು ಕ್ಷೇತ್ರದಿಂದ ವರದಿಯಾಗಿದೆ. 

Advertisement

ತಮ್ಮ ಗ್ರಾಮಕ್ಕೆ ವಾಹನ ಸಂಚಾರದ ಮಾರ್ಗವಿಲ್ಲದ್ದರಿಂದ ವ್ಯಕ್ತಿಯೊಬ್ಬರು ಕಿರಿಯ ಸೋದರ ಡಿಂಪಲ್‌ ದಾಸ್‌ನ ಮೃತದೇಹವನ್ನು ಸೈಕಲಲ್ಲಿಟ್ಟು ಸಾಗಿಸಿದ್ದಾರೆ. ಅಸ್ಸಾಂ ಸಿಎಂ ಸರ್ಬಾಧಿನಂದ ಸೋನವಲ್‌ ಅವರ ಕ್ಷೇತ್ರದ ಮಜುಲಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಟೀವಿ ಚಾನೆಲ್‌ಗ‌ಳು ಅದನ್ನು ವರದಿ ಮಾಡಿವೆ. 

ಮೃತ ಯುವಕನ ಕುಟುಂಬದವರು ಲಖೀಂಪುರ ಜಿಲ್ಲೆಯ ಬಲಿಜನ್‌ ಗ್ರಾಮದವರಾಗಿದ್ದು, ಗ್ರಾಮಕ್ಕೆ ಸುಮಾರು 8 ಕಿ.ಮೀ. ಸರಿಯಾದ ರಸ್ತೆ ಸಂಪರ್ಕವಿಲ್ಲ. ಮೃತರ ಮನೆಯವರು, ಆಸ್ಪತ್ರೆ ವಾಹನಕ್ಕೆ ಕಾಯದೇ, ಶವವನ್ನು ಸಾಗಿಸಿದ್ದಾರೆ. ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವಿಲ್ಲದ್ದರಿಂದ ಬಿದಿರಿನ ಸೇತುವೆ ದಾಟಿ, ಸೈಕಲಲ್ಲಿ ಶವ ಸಾಗಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸೋಮವಾರ ಮೃತ ಯುವಕ ಡಿಂಪಲ್‌ ದಾಸ್‌ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ತಪಾಸಣೆ ನಡೆಸುವಷ್ಟರಲ್ಲಿ ಮೃತಪಟ್ಟಿದ್ದ. ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಆತನನ್ನು ಸೈಕಲಲ್ಲೇ ಕೂರಿಸಿ ಕರೆತರಲಾಗಿತ್ತು. ಮೃತಪಟ್ಟ ಬಳಿಕವೂ ಶವವನ್ನು ಸೈಕಲ್ಲಿಗೆ ಕಟ್ಟಿ ಸಾಗಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ದಾಸ್‌ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಎಂ ಸೋನವಲ್‌ ಅವರು ತನಿಖೆಗೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next