Advertisement

ಬೋನಿಗೆ ಬಿದ್ದ ಚಿರತೆ

12:30 AM Dec 29, 2018 | Team Udayavani |

ಕಂಪ್ಲಿ: ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ಗಂಡು ಚಿರತೆಯೊಂದು ಬಿದ್ದಿದೆ. ಈ ಭಾಗದಲ್ಲಿ ಚಿರತೆಗಳು ಇಬ್ಬರು ಮಕ್ಕಳ ಬಲಿ ಪಡೆದ ಬಳಿಕ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ಗುಡ್ಡದ ಹತ್ತಿರ ಚೆಕ್‌ಡ್ಯಾಂ ಸಮೀಪ ಎರದಮಟ್ಟಿ ಬಳಿಯ ವೇಷಗಾರ್‌ ಜಂಭಯ್ಯನವರ ಮನೆ ಬಳಿ ಇರಿಸಿದ್ದ ಬೋನಿಗೆ ಬೆಳಗ್ಗೆ 7:20ರ ಸುಮಾರಿಗೆ ಏಳು ವರ್ಷದ ಗಂಡು ಚಿರತೆ ಬಿದ್ದಿದೆ. ಈ ಹಿಂದೆ ಡಿ.21ರಂದು ಹೆಣ್ಣು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು.

Advertisement

ಚಿರತೆಗಳ ಸೆರೆಗೆ ಅರಣ್ಯಾಧಿ ಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡುವ ಜತೆಗೆ ಸ್ಥಳೀಯರ ಸಹಕಾರದೊಂದಿಗೆ ಪ್ರತಿದಿನ ಕೂಂಬಿಂಗ್‌
ನಡೆಸುತ್ತಿದ್ದರು. ಸೋಮಲಾಪುರ, ದೇವಲಾಪುರ, ಮೆಟ್ರಿ, ದರೋಜಿ ಸೇರಿ 11 ಕಡೆ ಬೋನುಗಳನ್ನು ಹಾಗೂ ಮೂರು ಡಿಜಿಟಲ್‌ ಕ್ಯಾಮೆರಾ ಅಳವಡಿಸಿ
ಕ್ರಮ ಕೈಗೊಂಡಿದ್ದರು. “ಈಗಾಗಲೇ ಚಿರತೆ ದಾಳಿಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಶೋಕದ ವಾತಾವರಣ
ನಿರ್ಮಾಣವಾಗಿದೆ. ಈ ಹಿಂದೆ ಹೆಣ್ಣು ಚಿರತೆ, ಈಗ ಗಂಡು ಚಿರತೆ ಬೋನಿಗೆ ಬಿದ್ದಿದೆ’ ಎಂದು ದೇವಲಾಪುರ ಗ್ರಾಪಂ ಅಧ್ಯಕ್ಷ ಗೌಡ್ರು ಸುರೇಶಗೌಡ
ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next