Advertisement
ಗ್ರಾಮದ ಕುಮಾರ್ ಕುಡಿದ ಅಮಲಿನಲ್ಲಿ ಹಾವನ್ನು ಭೀಕರವಾಗಿ ಕಚ್ಚಿ ಸಾಯಿಸಿದ ಭೂಪ. ಸೆಂಟ್ರಿಂಗ್ ಕೆಲಸ ಮಾಡುವ ಈತ ಸೋಮವಾರ ನಂಗಲಿ ಗ್ರಾಮದ ಬಾರ್ ಒಂದರಲ್ಲಿ ಮದ್ಯವನ್ನು ಖರೀದಿಸಿ ಸೇವಿಸಿದ್ದನು. ಉಳಿದ ಮದ್ಯವನ್ನು ಮಂಗಳವಾರ ಬೆಳಗ್ಗೆ ತೋಟಕ್ಕೆ ಹೋಗಿ ಕುಡಿಯುತ್ತಿದ್ದಾಗ ಕಂಡ ಜೀವಂತ ಹಾವನ್ನು ಹಿಡಿದು ಕಚ್ಚಿ ಅರ್ಧಂಬರ್ಧ ಸಾಯಿಸಿದ್ದಾನೆ. ಅಲ್ಲದೇ ಅದನ್ನು ಕುತ್ತಿಗೆಗೆ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಗ್ರಾಮಕ್ಕೆ ಆಗಮಿಸಿದಾಗ ಊರವರು ಅದನ್ನು ಕಂಡು ಹೌಹಾರಿದ್ದಲ್ಲದೇ ಹಾವನ್ನು ತೆಗೆದುಹಾಕುವಂತೆ ಹೇಳಿದಾಗ ನಶೆಯಲ್ಲಿದ್ದ ಕುಮಾರ್, ಬೈಕ್ನಲ್ಲಿ ಕುಳಿತುಕೊಂಡೇ ಮದ್ಯವನ್ನು ಸೇವಿಸುತ್ತಾ ಹಾವನ್ನು ಕಚ್ಚಿ ಕಚ್ಚಿ ಸಾಯಿಸಿದ್ದಾನೆ. ಅದರಿಂದ ಆತನಿಗೆ ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. Advertisement
ಮದ್ಯದ ನಶೆಯಲ್ಲಿ ಜೀವಂತ ಹಾವನ್ನೇ ಕಚ್ಚಿ ಕೊಂದ ಭೂಪ !
08:05 AM May 06, 2020 | Sriram |
Advertisement
Udayavani is now on Telegram. Click here to join our channel and stay updated with the latest news.