Advertisement

ರಾಜ ಹೋಗಿ ಡೈಮಂಡ್‌ ಬಂತು!

09:34 AM Jun 28, 2019 | mahesh |

ಇದೊಂದು ಇಸ್ಪೀಟ್‌ ಕಾರ್ಡುಗಳ ಮ್ಯಾಜಿಕ್‌. ಜಾದೂಗಾರ ಇಸ್ಪೀಟ್‌ ರಾಜ ಮತ್ತು ಡೈಮಂಡ್‌ ರಾಣಿ ಕಾರ್ಡುಗಳನ್ನು ತೋರಿಸುತ್ತಾನೆ. ನಂತರ, ತನ್ನಲ್ಲಿರುವ ಒಂದು ಖಾಲಿ ಕವರಿನಲ್ಲಿ ಅವುಗಳನ್ನು ಇಟ್ಟು ಮಂತ್ರ ಹಾಕುತ್ತಾನೆ. ಎರಡೂ ಕಾರ್ಡುಗಳನ್ನು ತೆಗೆದು ತೋರಿಸಿದಾಗ ಇಸ್ಪೀಟ್‌ ರಾಜ ಇಸ್ಪೀಟ್‌ ರಾಣಿಯಾಗಿರುತ್ತಾಳೆ ಮತ್ತು ಡೈಮಂಡ್‌ ರಾಣಿ ಡೈಮಂಡ್‌ ರಾಜನಾಗಿರುತ್ತಾನೆ!

Advertisement

ತಂತ್ರ:
ಇಸ್ಪೀಟ್‌ ರಾಜನ ಹಿಂಭಾಗಕ್ಕೆ ಇಸ್ಪೀಟ್‌ ರಾಣಿಯನ್ನು ಅಂಟಿಸಿರಬೇಕು. ಹಾಗೇ ಡೈಮಂಡ್‌ ರಾಣಿಯ ಹಿಂಭಾಗಕ್ಕೆ ಡೈಮಂಡ್‌ ರಾಜನನ್ನು ಅಂಟಿಸಿರಬೇಕು. ಕವರಿನಲ್ಲಿ ಇಟ್ಟ ಕಾರ್ಡುಗಳನ್ನು ತೆಗೆಯುವಾಗ ತಿರುಗಿಸಿ ತೋರಿಸಬೇಕು.

ನಿಲ್ಲು ನೀ ಹುಲ್ಲಿನ ಕಡ್ಡಿ!
ಜಾದೂಗಾರ ಒಂದು ಹುಲ್ಲಿನ ಕಡ್ಡಿಯನ್ನು ನೀರು ತುಂಬಿದ ಬೀಕರಿನಲ್ಲಿ ಹಾಕುತ್ತಾನೆ. ಆ ಕಡ್ಡಿ ನೀರಿನಲ್ಲಿ ನೆಟ್ಟಗೆ ನಿಲ್ಲುತ್ತದೆ.
ಇದರ ರಹಸ್ಯ ಇಷ್ಟೆ. ಹುಲ್ಲಿನ ಕಡ್ಡಿಯ ಒಂದು ತುದಿಗೆ ಚಿಕ್ಕದಾದ ಸೂಜಿಯನ್ನು ತುರುಕಿಸಬೇಕು. ಸೂಜಿ ಇರುವಷ್ಟು ಭಾಗವು ನೀರಿನಲ್ಲಿ ಮುಳುಗುತ್ತದೆ, ಉಳಿದ ಭಾಗವು ಮೇಲಕ್ಕೆ ನೆಟ್ಟಗೆ ನಿಲ್ಲುತ್ತದೆ.

ನಿರೂಪಣೆ: ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next