Advertisement

ಕೊಂದವರನ್ನು ಸುಮ್ಮನೆ ಬಿಡಲ್ಲ: ಪೊಲೀಸರ ಶಪಥ

03:45 AM Jun 25, 2017 | |

ಶ್ರೀನಗರ: ಮಸೀದಿಯ ಹೊರಗೆ ಕಾವಲಿದ್ದ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಅಯ್ಯೂಬ್‌ ಪಂಡಿತ್‌ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿರುವ ಜಮ್ಮು-ಕಾಶ್ಮೀರ ಪೊಲೀಸರು ಶನಿವಾರ 12 ಮಂದಿ ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದಾರೆ.

Advertisement

ಇದೇ ವೇಳೆ, ಜಮ್ಮು-ಕಾಶ್ಮೀರ ಸರಕಾರವು ಅಯ್ಯೂಬ್‌ ಹತ್ಯೆಯ ತನಿಖೆಗೆಂದು ಶನಿವಾರ ವಿಶೇಷ ತನಿಖಾ ತಂಡ ರಚಿಸಿದೆ. ಜತೆಗೆ, ಉತ್ತರ ಶ್ರೀನಗರದ ಎಸ್ಪಿ ಸಾಜದ್‌ ಖಾಲಿದ್‌ ಭಟ್‌ ಅವರನ್ನು ಎತ್ತಂಗಡಿ ಮಾಡಿ ಡಿಜಿಪಿ ಎಸ್‌.ಪಿ.ವೇದ್‌ ಆದೇಶ ಹೊರಡಿಸಿದ್ದಾರೆ. “ಪೊಲೀಸ್‌ ಅಧಿಕಾರಿಯ ಸಾವಿಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ. ಇದು ಜಮ್ಮು-ಕಾಶ್ಮೀರ ಪೊಲೀಸರ ಶಪಥ’ ಎಂದು ವೇದ್‌ ಹೇಳಿದ್ದಾರೆ. ಘಟನೆಯಲ್ಲಿ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸೀನ್‌ ಮಲಿಕ್‌ ಕೈವಾಡವಿದೆಯೇ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ ಎಂದಿದ್ದಾರೆ.
ಈ ನಡುವೆ, ಮಲಿಕ್‌ರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದು,ಈದ್‌ ಹಬ್ಬದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಾಗಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next