Advertisement

“ದ ಕೇರಳ ಸ್ಟೋರಿ”ಸಿನಿಮಾ ನಿಷೇಧಕ್ಕೆ ಒತ್ತಾಯ

07:42 PM Nov 09, 2022 | Team Udayavani |

ತಿರುವನಂತಪುರ:ಮುಂದಿನ ವರ್ಷ ತೆರೆ ಕಾಣಲಿರುವ “ದ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆ ಆಗದಂತೆ ತಡೆಯಬೇಕು ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್‌ ಒತ್ತಾಯಿಸಿದ್ದಾರೆ.

Advertisement

ದೇವರೊಲಿದ ರಾಜ್ಯದಿಂದ 32 ಸಾವಿರ ಮಂದಿ ಮಹಿಳೆಯರು ನಾಪತ್ತೆಯಾಗಿ, ಉಗ್ರ ಸಂಘಟನೆ ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ವಿಚಾರವೇ ಸುಳ್ಳು. ರಾಜ್ಯದಲ್ಲಿ ಅಂಥ ಘಟನೆಗಳೇ ನಡೆದಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಟೀಸರ್‌ ವೀಕ್ಷಿಸಿದ್ದೇನೆ. ಇತರ ರಾಜ್ಯಗಳ ಮುಂದೆ ಕೇರಳದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕೇರಳ ಡಿಜಿಪಿ ತಿರುನಂತಪುರ ಪೊಲೀಸ್‌ ಆಯುಕ್ತರಿಗೆ ಚಿತ್ರತಂಡ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next