Advertisement

ʼThe Kerala Storyʼ ನಿರ್ದೇಶಕ ಆಸ್ಪತ್ರೆಗೆ ದಾಖಲು; ಹೇಗಿದೆ ಆರೋಗ್ಯ ಸ್ಥಿತಿ

01:46 PM May 27, 2023 | Team Udayavani |

ಮುಂಬಯಿ: ʼದಿ ಕೇರಳ ಸ್ಟೋರಿʼ ಸಿನಿಮಾದ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದುಕೊಂಡಿದೆ. 200 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ಈಗಲೂ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ ಒಳ್ಳೆಯ ಕಮಾಯಿ ಮಾಡುತ್ತಿದೆ.

Advertisement

ಸಿನಿಮಾ ರಿಲೀಸ್‌ ಆದಾಗಿನಿಂದ ಒಂದಲ್ಲ ಒಂದು ಕಾರಣದಿಂದ ಸಿನಿಮಾ ತಂಡ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಸಿನಿಮಾ ತಂಡ ಸಂಚರಿಸುತ್ತಿದ್ದ ಕಾರು ಅಪಘಾತಗೊಂಡಿತ್ತು. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಇದಾದ ಬಳಿದ ಅದಾ ಶರ್ಮಾ ಸೇರಿದಂತೆ ಮತ್ತೊಬ್ಬ ನಟಿಗೂ ಜೀವ ಬೆದರಿಕೆ ಬಂದಿತ್ತು. ಮೊನ್ನೆಯಷ್ಟೇ ಸಿನಿಮಾದಲ್ಲಿ ಲೀಡ್‌ ರೋಲ್‌ ನಲ್ಲಿ ಕಾಣಿಸಿಕೊಂಡ ನಟಿ ಅದಾ ಶರ್ಮಾ ಅವರ ವೈಯಕ್ತಿಕ ಫೋನ್‌ ನಂಬರ್‌ ನ್ನು ಸೋಶಿಯಲ್‌ ಮೀಡಿಯಾದಲ್ಲಿ ಹ್ಯಾಕರ್‌ ವೊಬ್ಬ ಲೀಕ್‌ ಮಾಡಿದ್ದ ಎನ್ನುವ ಸುದ್ದಿ ವೈರಲ್ ಆಗಿತ್ತು.

ಸಿನಿಮಾದ ನಿರ್ದೇಶಕ ಸುದೀಪ್ತೋ ಸೇನ್ ಅವರ ಆರೋಗ್ಯ ಹದೆಗೆಟ್ಟಿ ದ್ದು. ಅವರು ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದೇಹದಲ್ಲಿ ನಿರ್ಜಲೀಕರಣ (Dehydration) ಮತ್ತು ಸೋಂಕು ಉಂಟಾದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

“ನಿರ್ಜಲೀಕರಣ ಮತ್ತು ಸೋಂಕಿನಿಂದಾಗಿ ನಾನು ದಾಖಲಾಗಿದ್ದೇನೆ. ಆದರೆ ಈಗ ಎಲ್ಲವೂ ನಿಯಂತ್ರಣದಲ್ಲಿದೆ. ನಾನು ಇಂದು ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ನನ್ನನ್ನು ಮನೆಗೆ ಹೋಗಲು ಬಿಡುವಂತೆ ನಾನು ವೈದ್ಯರಲ್ಲಿ ವಿನಂತಿಸಲಿದ್ದೇನೆ.” ಎಂದು ತಮ್ಮ ಆರೋಗ್ಯದ ಬಗ್ಗೆ ಸ್ವತಃ ಸುದೀಪ್ತೋ ಸೇನ್ ಅಪ್ಡೇಟ್‌ ನೀಡಿದ್ದಾರೆ.

ಶೀಘ್ರದಲ್ಲಿ ನಿರ್ದೇಶಕ ಸುದೀಪ್ತೋ ಸೇನ್ ಚೇತರಿಕೆ ಕಾಣಲಿ ಎಂದು ಸಿನಿರಂಗದ ಗಣ್ಯರು ಆಶಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next