Advertisement

ಜೆಡಿಎಸ್‌ ಪಕ್ಷವನ್ನು ಅಖಂಡ ಕರ್ನಾಟಕವಾಗಿಸುವೆ: ವಿಶ್ವನಾಥ್‌

06:00 AM Aug 14, 2018 | Team Udayavani |

ಹುಣಸೂರು: ಗಡಿಯಲ್ಲಿ ನೆತ್ತರ ಹನಿ ಬೀಳಲು ಬಿಡುವುದಿಲ್ಲ, ಡಾಲರ್‌ ಬೆಲೆ ಇಳಿಸುತ್ತೇವೆ, ಹೀಗೆಲ್ಲಾ ಹೇಳಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ನೋಟು ಅಮಾನ್ಯಿàಕರಣ ಮಾಡಿ ದೇಶದ ಆರ್ಥಿಕ ನೀತಿ ಹದಗೆಡಿಸಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಆರೋಪಿಸಿದರು. 

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ತಾಲೂಕು ಜೆಡಿಎಸ್‌ ಆಯೋಜಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷ ಸಂಘಟನೆಯನ್ನು ಉತ್ತರ ಕರ್ನಾಟಕದಿಂದ ಆರಂಭಿಸಿ, ಕರಾವಳಿ ಕಡಲತಡಿವರೆಗೂ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ದೇವೇಗೌಡರ ಅವಧಿಯಲ್ಲಾದ ಕೆಲಸಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ ಎಂದರು. 

ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಕ್ಷದ ಕಚೇರಿಗೆ ಪ್ರತಿದಿನ ಒಬ್ಬರು ಮಂತ್ರಿ, 15 ದಿನಕ್ಕೊಮ್ಮೆ ಮುಖ್ಯಮಂತ್ರಿಗಳು ಭೇಟಿ ನೀಡುವಂತೆ ಆದೇಶಿಸಿದ್ದೇನೆ. ಜನಸಾಮಾನ್ಯರ, ಪಕ್ಷದ ಕಾರ್ಯಕರ್ತರ ಸಮಸ್ಯೆ ಪರಿಹರಿಸುವುದೇ ಪಕ್ಷದ ಗುರಿ ಎಂದರು. ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಸರ್ಕಾರ ಆಡಳಿತಕ್ಕೆ ಬರಲಿದೆ. ದೇಶದ ನಾಲ್ಕು ದಿಕ್ಕುಗಳಲ್ಲೂ ಪ್ರಾದೇಶಿಕ ಪಕ್ಷಗಳ ಆಡಳಿತವಿದೆ. ರಾಜ್ಯದಲ್ಲೂ ಪಕ್ಷ ಹೆಚ್ಚಿನ ಸ್ಥಾನ ಗಳಿಸುವತ್ತ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next