Advertisement

ಐಪಿಎಸ್‌ ಅಧಿಕಾರಿ ಮಧುಕರ ಶೆಟ್ಟಿ  ಅವರಿಗೆ ಶಸ್ತ್ರಚಿಕಿತ್ಸೆ ಪೂರ್ಣ

10:18 AM Dec 28, 2018 | |

ಕುಂದಾಪುರ: ಎಚ್‌1ಎನ್‌1 ಬಾಧಿತರಾಗಿರುವ ಕುಂದಾಪುರ ಮೂಲದ ಐಪಿಎಸ್‌ ಅಧಿಕಾರಿ ಡಾ| ಮಧುಕರ್‌ ಶೆಟ್ಟಿ ಅವರಿಗೆ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಶಸ್ತ್ರಚಿಕಿತ್ಸೆ ನಡೆದಿದ್ದು, ಹೈದ್ರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆಯ ವೈದ್ಯರು ಚಿಕಿತ್ಸೆ  ಮುಂದುವರಿಸಿದ್ದಾರೆ.

Advertisement

ಶ್ವಾಸಕೋಶ ಹಾಗೂ ಹೃದಯ ಸೋಂಕು ಅವರನ್ನು ಬಾಧಿಸಿದೆ. ತಜ್ಞ  ವೈದ್ಯರ ತಂಡ ಬುಧವಾರ ರಾತ್ರಿ ಮಧುಕರ್‌ ಶೆಟ್ಟಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರನ್ನು 72 ಗಂಟೆಗಳ ನಿಗಾದಲ್ಲಿರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಧುಕರ್‌ ಶೆಟ್ಟಿ ಅವರ ಚಿಕಿತ್ಸೆ ಬಗ್ಗೆ ತೆಲಂಗಾಣ ಪೊಲೀಸ್‌ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಸೈಬರ್‌ಬಾದ್‌ ಪೊಲೀಸ್‌ ಆಯುಕ್ತ  ಕರ್ನಾಟಕ ಮೂಲದ ವಿ.ಸಿ. ಸಜ್ಜನ್‌ವರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಆಸ್ಪತ್ರೆಯಲ್ಲಿದ್ದು, ವೈದ್ಯರ ಬಳಿ ಮಾಹಿತಿ ಪಡೆದು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಮಧುಕರ್‌ ಶೆಟ್ಟಿ ಆರೋಗ್ಯ, ಚಿಕಿತ್ಸೆ ಸಂಬಂಧ ರಾಜ್ಯದ ಸಿಐಡಿ ಎಡಿಜಿಪಿ ಪ್ರತಾಪ್‌ ರೆಡ್ಡಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ. ರಾಜ್ಯ ಪೊಲೀಸ್‌ ಅಕಾಡೆಮಿ ನಿರ್ದೇಶಕ ವಿಪುಲ್‌ಕುಮಾರ್‌,  ಕಲಬುರಗಿ ಎಸ್ಪಿ ಎನ್‌. ಶಶಿಕುಮಾರ್‌, ಮಧುಕರ್‌ ಶೆಟ್ಟಿ ಸ್ನೇಹಿತರಾದ ಹಿರಿಯ ಅಧಿಕಾರಿಗಳು, ಮಧುಕರ್‌ ಶೆಟ್ಟಿ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಮಧುಕರ್‌ ಶೆಟ್ಟಿ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬಂದಿ ಕಾಂಟಿನೆಂಟಲ್‌ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಅವರ ಚೇತರಿಕೆಗಾಗಿ ಹಾರೈಸುತ್ತಿದ್ದಾರೆ. ಹೈದ್ರಾಬಾದ್‌ನ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಯ ಉಪ ನಿರ್ದೇಶಕರಾಗಿ ಮಧುಕರ್‌ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next