Advertisement

ಗೌರಿ ಹತ್ಯೆ ಪ್ರಕರಣದ ತನಿಖೆ ಕೊನೇ ಹಂತದಲ್ಲಿ

06:35 AM Oct 01, 2018 | Team Udayavani |

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಪ್ರಶಂಸನೀಯ ಕೆಲಸ ಮಾಡಿದ್ದು, ತನಿಖೆ ಕೊನೆಯ ಹಂತಕ್ಕೆ ತಲುಪಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ|ಜಿ.ಪರಮೇಶ್ವರ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ,ಹತ್ಯೆ ಪ್ರಕರಣವನ್ನು ಎಸ್‌ಐಟಿ ಅಧಿಕಾರಿಗಳ ತಂಡ ಸೂಕ್ಷ್ಮವಾಗಿ ಭೇದಿಸಿ ಆರೋಪಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ. ರಾಜ್ಯದ ಎಸ್‌ಐಟಿ ತಂಡದ ತನಿಖೆ ರಾಷ್ಟ್ರ ಮೆಚ್ಚುವಂಥದ್ದು. ಎಸ್‌ಐಟಿ ಅಧಿಕಾರಿಗಳ ವಿರುದಟಛಿ ಆರೋಪಿಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ವಿಸ್ತರಣೆ
ಶೀಘ್ರದಲ್ಲಿ ನಡೆಯಲಿದ್ದು,ರಾಜ್ಯದ ಯಾವುದೇ ಭಾಗಕ್ಕೂಅನ್ಯಾಯವಾಗದಂತೆ ವಿಸ್ತರಣೆ ಮಾಡಲಾಗುವುದು. ಉತ್ತರ
ಕರ್ನಾಟಕ ಭಾಗಕ್ಕೆ ಯಾವುದೇ ಅನ್ಯಾಯವಾಗದಂತೆ ಪಕ್ಷದ ವರಿಷ್ಠರು ಕಾಳಜಿಯಿಂದ ಸಂಪುಟ ವಿಸ್ತರಣೆ ಮಾಡಲಿದ್ದಾರೆ.
– ಡಾ| ಜಿ.ಪರಮೇಶ್ವರ, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next