Advertisement

ತೈಲ ದರ ಹೆಚ್ಚಳ: ವೇಮಗಲ್‌ನಲ್ಲಿ ಕಾಂಗ್ರೆಸ್ ‌ಕಿಡಿ

07:20 PM Jun 17, 2021 | Team Udayavani |

ಕೋಲಾರ: ಕೇಂದ್ರ ಸರ್ಕಾರದ ಪೆಟ್ರೋಲ್‌ಮತ್ತು ಡೀಸೆಲ್‌, ಸಿಲಿಂಡರ್‌ ಹಾಗೂ ರಾಜ್ಯಸರ್ಕಾರ ಏರಿಸಿರುವ ವಿದ್ಯುತ್‌ ದರವನ್ನು ಈಕೂಡಲೇ ಕಡಿತಗೊಳಿಸಬೇಕೆಂದು ಆಗ್ರಹಿಸಿ ವೇಮಗಲ್‌ ಪೆಟ್ರೋಲ್‌ ಬಂಕ್‌ ಬಳಿ ಕೋಲಾರ ಗ್ರಾಮಾಂತರ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯಿತು.

Advertisement

ಕಿಸಾನ್‌ ಘಟಕದ ಜಿಲ್ಲಾಧ್ಯಕ್ಷ ಊರುಬಾಗಿಲುಶ್ರೀನಿವಾಸ್‌ ಮಾತನಾಡಿ, ಕಳೆದ ಕಾಂಗ್ರೆಸ್‌ಸಮ್ಮಿಶ್ರ ಸರ್ಕಾರದಲ್ಲಿ 23 ಸಾವಿರ ಕೋಟಿ ರೈತರಸಾಲ ಮತ್ತು ಬಡ್ಡಿ ಮನ್ನಾ ಮಾಡಲಾಗಿದೆ.ಆದರೆ, ಈಗಿನ ಸರ್ಕಾರ ರೈತರ ಮತ್ತುಕಾರ್ಮಿಕರಿಗೆ ಯಾವುದೇ ರೀತಿಯ ಸಹಾಯಮಾಡಿಲ್ಲ.ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠಕಲಿಸುತ್ತಾರೆಂದರು.

ಕೆಪಿಸಿಸಿ ಒಬಿಸಿ ಉಪಾಧ್ಯಕ್ಷಎಸ್‌.ಮಂಜುನಾಥ್‌ ಮಾತನಾಡಿ, ಬೆಲೆ ಏರಿಕೆಕಡಿತಗೊಳಿಸದಿದ್ದರೆ ನಮ್ಮ ಹೋರಾಟ ಇನ್ನೂಉಗ್ರವಾಗಿರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್‌ ಘಟಕದಅಧ್ಯಕ್ಷ ಉದಯಶಂಕರ್‌, ಗ್ರಾಮಾಂತರ ಬ್ಲಾಕ್‌ಕಾಂಗ್ರೆಸ್‌ ಕೆಪಿಸಿಸಿ ಒಬಿಸಿ ಉಪಾಧ್ಯಕ್ಷಮಂಜುನಾಥ್‌, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷಸೀತಿಹೊಸೂರು ಮುರಳಿಗೌಡ, ಯುವ ಘಟಕ ತಾಲೂಕು ಅಧ್ಯಕ್ಷ ನವೀನ್‌, ವೇಮಗಲ್‌ ಗ್ರಾಪಂಮಾಜಿ ಅಧ್ಯಕ್ಷ ಬಿ.ನಾಗರಾಜ್‌, ಮಂಜುನಾಥ್‌,ಮುಖಂಡರಾದ ವಕೀಲ ನಾಗೇಶ್‌, ನಾಗನಾಳಮುನಿವೆಂಕಟಪ್ಪ, ಬೆಟ್ಟಹೊಸಪುರ ಜಗನ್‌,ಖಾದ್ರಿಪುರ ಬಾಬು, ಜಮೀರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next