Advertisement

ಕುಟುಂಬ ರಾಜಕಾರಣದ ಚಿತ್ರಣ ಸಂಪೂರ್ಣ ಬದಲಾಗಿದೆ: ತೇಜಸ್ವಿ ಸೂರ್ಯ

04:23 PM Nov 12, 2021 | Team Udayavani |

ಪಣಜಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಕುಟುಂಬ ರಾಜಕಾರಣದ ಚಿತ್ರ ಕಂಡುಬರುತ್ತಿತ್ತು. ಆದರೆ ಪ್ರಜಾಪ್ರಭುತ್ವದಿಂದಾಗಿ ಸಂಪೂರ್ಣ ಚಿತ್ರಣವೇ ಬದಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ ನುಡಿದರು.

Advertisement

ಪಣಜಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಂಸತ್‍ನಲ್ಲಿ ಮಾತನಾಡಿ, ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಮಾರ್ಗದರ್ಶನದಲ್ಲಿ ಗೋವಾದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯಾಗಿದೆ. ಮುಂದೆಯೂ ಕೂಡ ಯುವಕರ ಸಹಕಾರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದರು.

ಇದನ್ನೂ ಓದಿ:ಲಕ್ಷಾಧಿಪತಿಯ ರಹಸ್ಯಗಳು; 4 ಅವಧಿಗಳ ಸರಳ, ಸುಲಭ ವಾಟ್ಸಪ್ ತರಬೇತಿ ಕಾರ್ಯಾಗಾರ

ಕೌಟುಂಬಿಕ ರಾಜಕಾರಣದ ಅಗತ್ಯವಿಲ್ಲ

ಗೋವಾ ರಾಜ್ಯದಲ್ಲಿ ಕೌಟುಂಬಿಕ ರಾಜಕಾರಣದ ಅಗತ್ಯವಿಲ್ಲ, ಇದರಿಂದಾಗಿ ಯುವಕರು ಭವಿಷ್ಯತ್ತಿನ ನಾಯಕರಾಗಲು ಮುಂದೆಬರಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕರೆ ನೀಡಿದರು.

Advertisement

ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಹೆಚ್ಚು ಪ್ರತಿನಿಧಿತ್ವ ಲಭಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ನ್ಯೂ ಇಂಡಿಯಾ ಮಿಷನ್ ಸಂಬಂಧಿತ ಉದ್ದೇಶವನ್ನು ಪೂರ್ಣಗೊಳಿಸುವ ಕಾರ್ಯವನ್ನು ಕೇವಲ ಯುವಕರು ಮಾತ್ರ ಮಾಡಲು ಸಾಧ್ಯ. ಸರ್ಕಾರವು ಯುವಕರ ಭವಿಷ್ಯಕ್ಕಾಗಿ ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡಲು ಪ್ರಯತ್ನ ನಡೆಸುತ್ತದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.

ಈ ಸಂದರ್ಭದಲ್ಲಿ ಮೌಲಾನಾ ಡಾ. ಸಯ್ಯದ್ ಕಲ್ಬೆ ರಿಜ್ವಿ ಮಾತನಾಡಿ, ದೇಶವನ್ನು ಮನಸ್ಸಿನಿಂದ ಪ್ರೀತಿಸಬೇಕು. ಭಾರತ ಮಾತೆ ಹಾಗೂ ನಮ್ಮ ತಾಯಿಯ ಮರ್ಯಾದೆಯನ್ನು ಕೆಳಕ್ಕೆ ಬೀಳುವ ಪರಿಸ್ಥಿತಿ ತಂದುಕೊಳ್ಳಬಾರದು ಎಂದರು.

ಈ ಸಂದರ್ಭದಲ್ಲಿ ಎಂಐಟಿಯ ರಾಹುಲ್ ಕರಾಡ್, ಪದ್ಮವಿಭೂಷಣ ಡಾ. ಸೋನಲ್ ಮಾನಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next