Advertisement

ಬಿಜೆಪಿಗೆ ಅಧಿಕಾರದ ಭ್ರಮೆ

07:20 AM Feb 10, 2019 | Team Udayavani |

ಭಾರತೀನಗರ: ಬಿಜೆಪಿ ಅಧಿಕಾರದ ಭ್ರಮೆಯಲ್ಲಿದೆ. ಮೈತ್ರಿ ಸರ್ಕಾರ 5 ವರ್ಷ ಆಡಳಿತ ನಡೆಸುವುದರಲ್ಲಿ ಯಾವುದೇ ಸಂಶಯವಿಲ್ಲ. ಕೆಲವು ಗೊಂದಲಗಳು ಸರ್ವೆ ಸಾಮಾನ್ಯ. ಅವುಗಳನ್ನು ನಿಭಾ ಯಿಸುವ ಸಾಮರ್ಥ್ಯ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವರಿಷ್ಠರಲ್ಲಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

Advertisement

ಸಮೀಪದ ಯಡಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 50 ಲಕ್ಷ ರೂ.ನಲ್ಲಿ ಕಾಲೋನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಬಿಜೆಪಿ ಅಧಿಕಾರ ಪಡೆ ಯಲು ಹಲವು ರೀತಿಯಲ್ಲಿ ಗೊಂದಲ ಸೃಷ್ಟಿಮಾಡುತ್ತಿದೆ. ಅದರಲ್ಲಿ ಸಿಲುಕಿ ಕೊಂಡು ಜನಾಕ್ರೋಶಕ್ಕೆ ಗುರಿಯಾಗುತ್ತಿದೆ ಎಂದು ಹೇಳಿದರು.

ತಮ್ಮ ಅಧಿಕಾರ ಅವಧಿಯಲ್ಲಿ ದ್ವೇಷ ಅಸೂಯೇ ಇಲ್ಲದೆ, ಕ್ಷೇತ್ರದ ಪ್ರತಿ ಗ್ರಾಮಕ್ಕೂ ತೆರಳಿ ಸಮಸ್ಯೆ ಆಲಿಸಿದ್ದೇನೆ. ಯಾವುದೇ ಚ್ಯುತಿಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷಗಳು ಯಾವುದೇ ಇರಲಿ ಜನಪ್ರತಿನಿಧಿಗಳು ಜನರ ಹಿತಕಾಪಾಡಲು ಮುಂದಾಗಬೇಕು ಎಂದು ಹೇಳಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿ ಮ್ಮೇಗೌಡ, ಕರಡಕೆರೆ ಹನುಮಂತೇಗೌಡ, ತಾಪಂ ಸದಸ್ಯ ನಂಜುಂಡೇಗೌಡ, ಎಇಇ ಪುಟ್ಟರಾಜು, ಎಇ ಹನುಮಂತು, ಗುತ್ತಿಗೆದಾರ ಕೆ.ರವೀಂದ್ರ, ಮುಖಂಡ ರಾದ ರೈಸ್‌ಮಿಲ್‌ ಪುಟ್ಟೇಗೌಡ, ನಂದೀಶ್‌, ಕೃಷ್ಣ, ಬಸವರಾಜು, ಎಪಿಎಂಸಿ ನಿರ್ದೇಶಕ ಬೋರೇಗೌಡ, ಪುಟ್ಟಲಿಂಗಾಚಾರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುಧಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next