Advertisement

ಪತಿಯ ಕೊಂದ ಪತ್ನಿ, ಪ್ರಿಯಕರ ಬಂಧನ

06:00 AM Mar 08, 2019 | Team Udayavani |

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಕಾರಣಕ್ಕೆ ಪತಿಯನ್ನು ಹತ್ಯೆಗೈದ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರು ಆರೋಪಿಗಳು ದೊಡ್ಡಬಳ್ಳಾಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕೋಡಿಹಳ್ಳಿ ಗ್ರಾಮದ ಗಾಯತ್ರಿ (35), ಈಕೆಯ ಪ್ರಿಯಕರ ಕಿರಣ್‌ ಕುಮಾರ್‌ ಅಲಿಯಾಸ್‌ ಗಿಡ (20) ಮತ್ತು ಆತನ ಅಪ್ರಾಪ್ತ ಸಹೋದರನನ್ನು ಬಂಧಿಸಲಾಗಿದೆ. ಆರೋಪಿಗಳು ಫೆ.24ರಂದು ಉಜ್ಜನಿ ಅರಣ್ಯ ಪ್ರದೇಶದಲ್ಲಿ ಉಮೇಶ್‌ ಎಂಬಾತನ ಕುತ್ತಿಗೆ ಬಿಗಿದು ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿ ಕಿರಣ್‌ ಕುಮಾರ್‌ ತಮಟೆ ಹೊಡೆಯುವ ಕೆಲಸ ಮಾಡುತ್ತಿದ್ದು, ಕೋಡಿಹಳ್ಳಿಯಲ್ಲಿ ವಾಸವಾಗಿದ್ದ. ಇದೇ ಗ್ರಾಮದಲ್ಲಿ ಗಾಯತ್ರಿ ಹಾಗೂ ಪತಿ ಉಮೇಶ್‌ ಕೂಡ ವಾಸವಾಗಿದ್ದರು. ಗಾಯತ್ರಿ ಹಾಗೂ ಕಿರಣ್‌ ಕುಮಾರ್‌ ಅಕ್ರಮ ಸಂಬಂಧ ಹೊಂದಿದ್ದರು.

ಈ ವಿಚಾರ ತಿಳಿದ ಉಮೇಶ್‌, ಪತ್ನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಕೂಡ ನಡೆದಿತ್ತು. ಆದರೂ ಪತ್ನಿ ಸರಿ ಹೋಗಿರಲಿಲ್ಲ. ಪತಿಯ ವಿರುದ್ಧ ಕೋಪಗೊಂಡ ಗಾಯತ್ರಿ, ಪ್ರಿಯಕರ ಕಿರಣ್‌ ಕುಮಾರ್‌ ಜತೆ ಸೇರಿ ಪತಿ ಹತ್ಯೆಗೆ ಸಂಚು ರೂಪಿಸಿದ್ದಳು.

ಫೆ.23ರಂದು ಆರೋಪಿ ಕಿರಣ್‌ ಕುಮಾರ್‌ ಕಾರ್ಯನಿಮಿತ್ತ ಹೊರಗಡೆ ಹೋಗಬೇಕು ಎಂದು ಹೇಳಿ ಉಮೇಶನನ್ನು ತನ್ನ ಸ್ವಂತ ಊರಾದ ರಾಜಘಟ್ಟಕ್ಕೆ ಬೈಕ್‌ನನಲ್ಲಿ ಕರೆದೊಯ್ದು, ತನ್ನ ಮನೆಯಲ್ಲೇ ಉಪಚರಿಸಿದ್ದಾನೆ.

Advertisement

ನಂತರ ಫೆ.24ರಂದು ತನ್ನ ಅಪ್ರಾಪ್ತ ಸಹೋದರನ ಜತೆ ಉಮೇಶ್‌ನನ್ನು ಉಜ್ಜನಿ ಬೆಟ್ಟದ ಅರಣ್ಯ ಪ್ರದೇಶದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಸಂಜೆ 4 ಗಂಟೆ ಸುಮಾರಿಗೆ ವೈರ್‌ನಿಂದ ಉಮೇಶ್‌ನ ಕುತ್ತಿಗೆ ಬಿಗಿದು, ಕಲ್ಲುಗಳನ್ನು ಎತ್ತಿ ಹಾಕಿ ದಾರುಣವಾಗಿ ಹತ್ಯೆಗೈದಿದ್ದ.

ನಂತರ ಯಾರಿಗೂ ತಿಳಿಯದಂತೆ ವಾಪಸ್‌ ಊರಿಗೆ ಬಂದು ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ. ಫೆ.26ರಂದು ಅರಣ್ಯ ಪ್ರದೇಶಕ್ಕೆ ಹೋಗಿದ್ದ ಚನ್ನೇಗೌಡ ಎಂಬುವರು ಕೊಳೆತ ಸ್ಥಿತಿಯಲ್ಲಿದ್ದ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಸಂಂಬಧ ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next