Advertisement

ಪಾಲಿಕೆಯಿಂದ ವಾಹನ ಬಾಡಿಗೆ ಬಾಕಿ; ಭರವಸೆಯ ಬೆನ್ನಲ್ಲೇ ಹೋರಾಟ ಅಂತ್ಯ

09:21 AM Jun 12, 2019 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಸೇವೆಗೆ ನೀಡಲಾದ ವಾಹನಗಳ ಬಾಡಿಗೆ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ವಾಹನ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ವಾಹನ ಸೇವೆ ಸ್ಥಗಿತಗೊಳಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ಭರವಸೆ ಮೇಲೆ ಮಂಗಳವಾರ ಹಿಂಪಡೆಯಲಾಗಿದೆ.

Advertisement

ಕಳೆದ ಹಲವಾರು ವರ್ಷಗಳಿಂದ ಮಹಾನಗರ ಪಾಲಿಕೆಗೆ ಮಾಸಿಕ ಬಾಡಿಗೆ ಆಧಾರದ ಮೇಲೆ ವಾಹನಗಳನ್ನು ನೀಡಲಾಗಿದ್ದು, ಕಳೆದ ಮೂರ್‍ನಾಲ್ಕು ತಿಂಗಳಿಂದ ವಾಹನಗಳ ಬಾಡಿಗೆ ಹಣ ಸಂದಾಯ ಮಾಡಲಾಗಿಲ್ಲ. ಒಟ್ಟು 38 ವಾಹನಗಳು ಬಾಡಿಗೆ ಆಧಾರಿತ ಸೇವೆ ನೀಡುತ್ತಿದ್ದು, ಸುಮಾರು 30 ಲಕ್ಷ ರೂ. ಹಣ ಪಾವತಿಯಾಗಬೇಕಾಗಿತ್ತು. ಆದರೆ ಕಳೆದ ವಾರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಸ್ಪಂದನೆ ನೀಡಿರಲಿಲ್ಲ. ಆದ್ದರಿಂದ ಸೋಮವಾರದಿಂದ ವಾಹನ ಸಂಚಾರ ಸ್ಥಗಿತಗೊಳಿಸಿ ಹೋರಾಟ ಆರಂಭಿಸಲಾಗಿತ್ತು.

ಮಂಗಳವಾರ ಮಧ್ಯಾಹ್ನ ಪಾಲಿಕೆ ಉಪ ಆಯುಕ್ತ ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು ಸಂಜೆಯೊಳಗೆ ಬಾಕಿ ಇರುವ ಹಣ ಸಂದಾಯ ಮಾಡಲಾಗುವುದು ಪ್ರತಿಭಟನೆ ಹಿಂಪಡೆಯಿರಿ ಎಂದು ಮೌಖೀಕವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲಾಗಿದೆ. ಪ್ರೇಮನಾಥ ಚಿಕ್ಕತುಂಬಳ, ಸತೀಶ ಬಳ್ಳಾರಿ, ಬಸಪ್ಪ ದೊಡ್ಡಮನಿ, ಪರಶುರಾಮ ಸೋನಿಕರ, ಹನುಮಂತ, ಈರಪ್ಪ ಜೋಗಿ, ಪ್ರಕಾಶ ಅತ್ತಿಗೇರಿ, ಅಶೋಕ ಲಮಾಣಿ, ರವಿ ವಗ್ಗರ, ಶ್ರೀನಿವಾಸ ಹಿರೇಮನಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next