Advertisement

ಹೈಕೋರ್ಟ್‌ ಮೊರೆ ಹೋದ ಎನ್‌ಐಎ

12:01 PM Jul 11, 2018 | |

ಬೆಂಗಳೂರು: ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಬಂಧಿತರಾಗಿ ಕೇಂದ್ರ ಕಾರಾಗೃಹದಲ್ಲಿರುವ ಮೂವರು ಆರೋಪಿಗಳ ಧ್ವನಿ ಮಾದರಿ ಪರೀಕ್ಷೆಗೆ ಅನುಮತಿ ನಿರಾಕರಿಸಿದ ಅಧೀನ ನ್ಯಾಯಾಲಯದ ಕ್ರಮ ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೈಕೋರ್ಟ್‌ ಮೊರೆಹೋಗಿದೆ.

Advertisement

ಪ್ರಕರಣದ ಆರೋಪಿಗಳಾದ ದಲ್ಲಿಮ್‌-ಮೀ, ಅಶೋಕ ಮಹದೇವ ಕುಂಬಾರ ಮತ್ತು ರಾಜೇಂದ್ರ ಪಾಟೀಲ ಎಂಬುವರ ಧ್ವನಿ ಮಾದರಿ ಪರೀಕ್ಷೆಗೆ ಅನುಮತಿ ಕೋರಿ ಎನ್‌ಐಎಎ ಹೈಕೋರ್ಟ್‌ಗೆ ಮನವಿ ಮಾಡಿದೆ. ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಎನ್‌. ಫ‌ಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಆರೋಪಿಗಳಿಗೆ ನೋಟಿಸ್‌ ನೀಡಿದೆ.

ಮುಂಬೈ ಪೊಲೀಸರು ನೀಡಿದ್ದ ಮಾಹಿತಿ ಆಧರಿಸಿ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಈ ಮೂವರೂ ಆರೋಪಿಗಳನ್ನು ಬೆಳಗಾವಿಯ ಚಿಕ್ಕೋಡಿ ಠಾಣಾ ಪೊಲೀಸರು ಮಾರ್ಚ್‌ 12ರಂದು ಬಂಧಿಸಿದ್ದರು. ಇವರ ಬಳಿ 3.50 ಲಕ್ಷ ಮೊತ್ತದ ಖೋಟಾ ನೋಟುಗಳು ಪತ್ತೆಯಾಗಿದ್ದವು.

ನಂತರ ಪ್ರಕರಣವು ಎನ್‌ಐಎ ತನಿಖೆಗೆ ವರ್ಗಾವಣೆಯಾಗಿತ್ತು. ಇದರಿಂದ ಆರೋಪಿಗಳ ಧ್ವನಿ ಪರೀಕ್ಷೆಗೆ ನಗರದ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ತನಿಖಾಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ನಿರಾಕರಿಸಿದ್ದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next