Advertisement

ರಂಗದ ಮೇಲೆ ನಾಯಕಿ

11:53 AM Sep 08, 2019 | Lakshmi GovindaRaju |

ನಿರ್ದೇಶಕ ದಯಾಳ್‌ ಪದ್ಮನಾಭನ್‌ ಮತ್ತೊಂದು ಕ್ರೈಂ-ಥ್ರಿಲ್ಲರ್‌ ಕಹಾನಿಯನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೌದು, ಕೆಲ ತಿಂಗಳ ಹಿಂದಷ್ಟೇ “ರಂಗನಾಯಕಿ’ ಚಿತ್ರವನ್ನು ಶುರು ಮಾಡಿದ್ದ ದಯಾಳ್‌, ಈಗ ಸದ್ದಿಲ್ಲದೆ ಆ ಚಿತ್ರದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ, ಇತ್ತೀಚೆಗೆ ಟ್ರೇಲರ್‌ ಮೂಲಕ ಅದನ್ನು ಹೊರತಂದಿದ್ದಾರೆ.

Advertisement

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಿರಿಯ ನಟಿ ತಾರಾ ಅನುರಾಧ, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ನಟಿ ಅರ್ಚನಾ ಜೋಯಿಸ್‌, ನಟ ಒರಟ ಪ್ರಶಾಂತ್‌, ನಿರ್ಮಾಪಕ ಭಾ.ಮಾ ಹರೀಶ್‌ ಮುಂತಾದವರು ಅತಿಥಿಗಳಾಗಿ ಆಗಮಿಸಿ “ರಂಗನಾಯಕಿ’ಯ ಮೊದಲ ಟ್ರೇಲರ್‌ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. “ರಂಗನಾಯಕಿ’ ಚಿತ್ರದಲ್ಲಿ ನಟಿ ಅದಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್‌, ಸುಂದರ್‌, ಚಂದ್ರಚೂಡ್‌ ಮೊದಲಾದವರು ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಕದ್ರಿ ಮಣಿಕಾಂತ್‌ ಸಂಗೀತ ಸಂಯೋಜಿಸಿದ್ದು, ಮಾಮೂಲಿ ಹಾಡುಗಳಿಗಿಂತ ಭಿನ್ನವಾಗಿರುವ “ಕೃಷ್ಣ ನೀ ಬೇಗನೇ ಬಾರೋ…’, “ಸೀತಾ ಕಲ್ಯಾಣ ವೈಭವ’ ಮೊದಲಾದ ಸಾಹಿತ್ಯದ ಸಾಲುಗಳನ್ನು ಬಳಸಿಕೊಳ್ಳಲಾಗಿದೆ. ನಾರಾಯಣ್‌ ನಿರ್ಮಾಣದ “ರಂಗನಾಯಕಿ’ ಚಿತ್ರಕ್ಕೆ ರಾಕೇಶ್‌ ಛಾಯಾಗ್ರಹಣವಿದ್ದು, ಅವಿನಾಶ್‌ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಸದ್ಯಕ್ಕೆ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ತಿಂಗಳು “ರಂಗನಾಯಕಿ’ಯನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದೆ. ಸದ್ಯ ಬಿಡುಗಡೆಯಾಗಿರುವ “ರಂಗನಾಯಕಿ’ಯ ಟ್ರೇಲರ್‌ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಚಿತ್ರ ತೆರೆಮೇಲೆ ಎಷ್ಟು ಪರಿಣಾಮಕಾರಿಯಾಗಿ ಬಂದಿದೆ ಅನ್ನೋದು ಬಿಡುಗಡೆಯಾದ ಮೇಲಷ್ಟೆ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next