Advertisement

ಕಾಂಗ್ರೆಸ್‌ ದುಷ್ಟರಕೂಟಕ್ಕೆ ದಿಗ್ವಿಜಯಸಿಂಗ್‌ ಮುಖ್ಯಸ್ಥ

06:58 AM Feb 18, 2017 | Team Udayavani |

ಮೈಸೂರು: ಕಾಂಗ್ರೆಸ್‌ ಹೈಕಮಾಂಡ್‌ಗೆ ಕಪ್ಪಕೊಡುವ ಸಲುವಾಗಿಯೇ ಸಿಎಂ ಸಿದ್ದರಾಮಯ್ಯ ದುಷ್ಟರಕೂಟವನ್ನೇ ರಚಿಸಿಕೊಂಡಿದ್ದಾರೆ. ಆ ಕೂಟದ ಮೂಲಕವೇ ಎಲ್ಲರನ್ನೂ ಸಮಾಧಾನಪಡಿಸುತ್ತಿದ್ದು, ದುಷ್ಟರಕೂಟಕ್ಕೆ ದಿಗ್ವಿಜಯಸಿಂಗ್‌
ಮುಖ್ಯಸ್ಥರಾಗಿದ್ದಾರೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಆರೋಪಿಸಿದರು.

Advertisement

ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಚಿವ ಎಚ್‌ .ಸಿ.ಮಹದೇವಪ್ಪ ಸಿದ್ದರಾಮಯ್ಯ ಅವರ ಗುಲಾಮ. ಆತ ರಾಜಕೀಯದಲ್ಲಿರುವುದೇ ಸಿದ್ದರಾಮಯ್ಯನಿಂದ. ಹೀಗಾಗಿ ಆತನಿಗೆ ವೋಟು, ಹಣ, ಅಧಿಕಾರ ಎಲ್ಲವನ್ನೂ ಕೊಟ್ಟಿದ್ದು ಸಿದ್ದರಾಮಯ್ಯ. ಅವರ ಕೃಪಾಕಟಾಕ್ಷವಿಲ್ಲದೇ ಹೋದರೆ ಮಹದೇವಪ್ಪಗೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಶಕ್ತಿಯೂ ಇಲ್ಲ ಎಂದು
ಲೇವಡಿ ಮಾಡಿದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ?: ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರಾಭವಗೊಂಡರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುತ್ತೀರಾ ಎಂದು ಸಿದ್ದರಾಮಯ್ಯ ಅವರಿಗೆ ಪ್ರಸಾದ್‌ ಸವಾಲೆಸೆದರು. ಉಪ
ಚುನಾವಣೆಯಲ್ಲಿ ಗೆಲ್ಲುವ ಕಾರಣಕ್ಕಾಗಿ ಸಿದ್ದರಾಮಯ್ಯ ತಮ್ಮ ಸಂಪುಟ ಮಾತ್ರವಲ್ಲದೆ ಎಐಸಿಸಿಯ ಎಲ್ಲ ಮುಖಂಡರನ್ನೂ ಕರೆದುಕೊಂಡು ಬರಲಿ. ಉಪ ಚುನಾವಣೆಯಲ್ಲಿ ನಾನು ಸೋತರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಕಾಂಗ್ರೆಸ್‌ ಸೋತರೆ ನೀವು ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ತೆಗೆದು ಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next