Advertisement

ಆಪರೇಷನ್‌ ಕಮಲದ ಅರ್ಧ ಸತ್ಯ ಹೊರಬಂದಿಲ್ಲ

01:18 AM Jan 26, 2019 | Team Udayavani |

ಬೆಂಗಳೂರು: ಆಪರೇಷನ್‌ ಕಮಲದ ವಿಚಾರದಲ್ಲಿ ಮಾಧ್ಯಮಗಳು ಅರ್ಧ ಸತ್ಯವನ್ನು ಮಾತ್ರ ಹೇಳುತ್ತಿವೆ. ಇದರಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರವೂ ಇದೆ. ಅದನ್ನೂ ಮಾಧ್ಯಮಗಳು ಬಹಿರಂಗ ಪಡಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಆಪರೇಷನ್‌ ಕಮಲದಲ್ಲಿ ಹಣದ ವಿಚಾರವೂ ಪ್ರಮುಖವಾಗಿದ್ದು, ಹಣಕಾಸಿನ ವಿಚಾರವನ್ನು ಮುಚ್ಚಿಡ ಲಾಗಿದೆ. ಅದನ್ನು ಬಹಿರಂಗ ಪಡಿಸಿ ಜನತೆಯ ಮುಂದಿಡಬೇಕು. ಸದ್ಯದ ಎಲ್ಲಾ ಆವಾಂತರಗಳಿಗೂ ಬಿಜೆಪಿಯೇ ಕಾರಣವಾಗಿದ್ದು, ಆಪರೇಷನ್‌ ಕಮಲ ಪ್ರಯತ್ನ ನಡೆಯದೇ ಇದ್ದಿದ್ದರೆ, ರೆಸಾರ್ಟ್‌ಗೆ ಹೋಗುವ ಅಗತ್ಯ ಬೀಳುತ್ತಿರಲಿಲ್ಲ. ಗಲಾಟೆಯೂ ಆಗುತ್ತಿರಲಿಲ್ಲ. ಆಪರೇಷನ್‌ ಕಮಲದ ಹಿಂದಿನ ಮೂಲ ಪತ್ತೆ ಹಚ್ಚಬೇಕು ಎಂದು ಮನವಿ ಮಾಡಿದರು.

ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಪ್ರಕರಣ ಕುರಿತಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸಿಲ್ಲ. ಆನಂದ್‌ ಸಿಂಗ್‌ ಅವರು ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ. ಅವರ ವಿಚಾರದಲ್ಲಿ ಯಾವುದೇ ವಿಷಯವನ್ನು ಮುಚ್ಚಿಟ್ಟಿಲ್ಲ ಎಂದು ಡಿ.ಕೆ.ಸುರೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next