Advertisement

ನಾನೇ ಕರೆತಂದ ವ್ಯಕ್ತಿಗಳು ನನಗೆ ಟೋಪಿ ಹಾಕಿದರು

11:18 PM Dec 15, 2019 | Lakshmi GovindaRaj |

ಶಿರಸಿ: ನಾನೇ ಕರೆತಂದ ವ್ಯಕ್ತಿಗಳು ನನಗೇ ಟೋಪಿ ಹಾಕಿದರು ಎಂದು ಮಾಜಿ ರಾಜ್ಯಪಾಲೆ, ಕಾಂಗ್ರೆಸ್‌ ನಾಯಕಿ ಮಾರ್ಗರೆಟ್‌ ಆಳ್ವಾ ಅಸಮಾಧಾನ ವ್ಯಕ್ತಪಡಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಲ್ಲಾಪುರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯಲ್ಲಿ ಹಿರಿಯಳಾದ ನನ್ನನ್ನು ಒಂದೇ ಒಂದು ಮಾತು ಕೇಳಲಿಲ್ಲ.

Advertisement

ಪ್ರಚಾರಕ್ಕೂ ಕರೆದಿಲ್ಲ. ದೇಶಪಾಂಡೆ ಅವರನ್ನು ಕಾಂಗ್ರೆಸ್‌ಗೆ ಕರೆ ತಂದಿದ್ದು, ಮಂತ್ರಿ ಮಾಡಿದ್ದು ನಾನೇ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಿರಂತರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಹೆಬ್ಬಾರ್‌ ಅವರನ್ನು ಪಕ್ಷಕ್ಕೆ ಕರೆತಂದವಳು ನಾನು. ಅವರು ಮಂತ್ರಿ ಆದರೆ ನಮಗೂ ಸಂತೋಷ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next