Advertisement

ಸರ್ವ ಜನಾಂಗಕ್ಕೆ ದಾರಿ ತೋರುವ ಮಹಾಪುರುಷ: ಸುಶೀಲಾ

11:47 AM Feb 16, 2018 | Team Udayavani |

ಸೇಡಂ: ಸಂತ ಸೇವಾಲಾಲ ಮಹಾರಾಜರು ಸರ್ವ ಜನಾಂಗಕ್ಕೆ ದಾರಿ ತೋರುವ ಮಹಾನ್‌ ವ್ಯಕ್ತಿತ್ವ ಹೊಂದಿದವರು ಎಂದು ಸಹಾಯಕ ಆಯುಕ್ತೆ ಡಾ| ಸುಶೀಲಾ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಪ್ರಥಮ ಬಾರಿಗೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡು ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸೇವಾಲಾಲ ಮಹಾರಾಜರು ಕೇವಲ ಬಂಜಾರಾ ಸಮಾಜಕ್ಕೆ ಸೀಮಿತವಲ್ಲ.
 
ಅವರ ಆದರ್ಶಮಯ ಬದುಕು ಇಡೀ ಜೀವ ಸಂಕುಲಕ್ಕೆ ದಾರಿಮಾಡಿ ಕೊಡುವಂತದ್ದು. ಯುವ ಜನತೆ ಅವರ ದಾರಿಯಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು. ತೋಟಗಾರಿಕೆ ಮಹಾಮಂಡಳಿ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರಾವ ಮಾಲಿಪಾಟೀಲ, ಉಪನ್ಯಾಸಕ ಪಿ.ಜಿ. ರಾಠೊಡ ಮಾತನಾಡಿದರು. 

Advertisement

ತಾಪಂ ಅಧ್ಯಕ್ಷೆ ಸುರೇಖಾ ಪುರಾಣಿಕ, ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಚವ್ಹಾಣ, ಎಪಿಎಂಸಿ ಅಧ್ಯಕ್ಷ ಗುರುನಾಥರೆಡ್ಡಿ ಪಾಟೀಲ ಹೂಡಾ, ಪ್ರೋಬೇಷನರಿ ತಹಶೀಲ್ದಾರ್‌ ಅಜುಂತಬಸುಮ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೊಡ, ಬಂಜಾರ ಸಮಾಜದ ತಾಲೂಕಾಧ್ಯಕ್ಷ ರಾಜು ಚವ್ಹಾಣ, ನಗರಧ್ಯಕ್ಷ ಅಶೋಕ ಪವಾರ, ಗೋಪಾಲ ರಾಠೊಡ, ಹೆಮ್ಲಾ ನಾಯಕ ಇದ್ದರು. ಸುಬ್ಬಣ್ಣ ಜಮಖಂಡಿ ಸ್ವಾಗತಿಸಿದರು. ಶಿವಶಂಕರಯ್ಯಸ್ವಾಮಿ ನಿರೂಪಿಸಿದರು. ಶರಣಯ್ಯಸ್ವಾಮಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next