Advertisement

ಸಿದ್ದರಾಮಯ್ಯಗೆ ಬಯಸಿದ ಮನೆ ನೀಡಿದ ಸರ್ಕಾರ

11:15 PM Oct 26, 2019 | Team Udayavani |

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸರ್ಕಾರ ಕಡೆಗೂ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿದೆ. ಸಿದ್ದರಾಮಯ್ಯ ಅವರು ಬಯಸಿದಂತೆ ಕುಮಾರಕೃಪಾ ಪೂರ್ವದಲ್ಲಿರುವ ಪ್ಲಾಟ್‌ ನಂಬರ್‌ 1ನ್ನು ನೀಡಿದೆ. ಈಗಾಗಲೇ ವಾಸವಿರುವ ಕಾವೇರಿ ನಿವಾಸವನ್ನು ತಮಗೆ ನೀಡುವಂತೆ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.

Advertisement

ಆದರೆ, ಕಾವೇರಿ ನಿವಾಸವನ್ನು ಮುಖ್ಯಮಂತ್ರಿಗೆ ಹಂಚಿಕೆ ಮಾಡಿದ್ದರಿಂದ ಆ ನಿವಾಸವನ್ನು ತೆರವುಗೊಳಿಸುವಂತೆ ಸೂಚಿಸಿ, ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ರೇಸ್‌ ವ್ಯೂ ಕಾಟೇಜ್‌-2ನ್ನು ಹಂಚಿಕೆ ಮಾಡಲಾಗಿತ್ತು. ಆ ನಿವಾಸಕ್ಕೆ ತೆರಳಲು ಹಿಂದೇಟು ಹಾಕಿದ ಸಿದ್ದರಾಮಯ್ಯ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಂಚಿಕೆ ಮಾಡಿದ್ದ ಕುಮಾರಕೃಪಾ ಪೂರ್ವದಲ್ಲಿರುವ ಮನೆಯನ್ನು ತಮಗೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಅವರ ಮನವಿಯಂತೆ ಅವರು ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದಾಗ ವಾಸವಾಗಿದ್ದ ಕುಮಾರಕೃಪಾ ಪೂರ್ವ ಭಾಗದ ಮನೆಯನ್ನೇ ನೀಡಲಾಗಿದೆ. ಈ ನಿವಾಸದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಾಸವಿದ್ದರು. ಹೀಗಾಗಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರೇಸ್‌ ಕೋರ್ಸ್‌ ರಸ್ತೆಯ ರೇಸ್‌ ವ್ಯೂ ಕಾಟೇಜ್‌-2 ಮನೆಯನ್ನು ಹಂಚಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next