Advertisement

ಲೋಕಾಯುಕ್ತದಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿಲ್ಲ

03:56 PM Nov 19, 2017 | |

ಕುಂದಾಪುರ: ರಾಜ್ಯ ಸರಕಾರ ಎಸಿಬಿಯನ್ನು ರಚನೆ ಮಾಡಿದ್ದರಿಂದ ಲೋಕಾಯುಕ್ತದ ಒಂದಂಶ ಅಧಿಕಾರ ಮೊಟಕುಗೊಂಡಿರುವುದು ನಿಜ. ಆದರೆ ಲೋಕಾಯುಕ್ತದ ಯಾವುದೇ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ರಾಜ್ಯದ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಹೇಳಿದರು.

Advertisement

ಅವರು ಕುಂದಾಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸಿಬಿ ರಚನೆಯಾದ ಬಳಿಕ ಲೋಕಾಯುಕ್ತಕ್ಕೆ ಭ್ರಷ್ಟಾಚಾರ ಪ್ರಕರಣದಲ್ಲಿ ದಾಳಿ ನಡೆಸಿ, ಕೇಸು ದಾಖಲಿಸುವ ಅಧಿಕಾರ ಇಲ್ಲ. ಆದರೆ ಇನ್ನಿತರ ಎಲ್ಲ ರೀತಿಯ ಅಧಿಕಾರವೂ ಇದೆ ಎಂದರು.

ಪ್ರಕರಣಗಳ ವಿಲೇವಾರಿಯಲ್ಲಿ ಹಿಂದಿಗಿಂತ ಈಗ ಲೋಕಾಯುಕ್ತದ ವೇಗ ಹೆಚ್ಚಿದೆ. ದಿನಕ್ಕೆ 90 ರಿಂದ 100 ಪ್ರಕರಣಗಳು ಬರುತ್ತಿದ್ದು, ತಿಂಗಳಿಗೆ ಒಬ್ಬ ತನಿಖಾಧಿಕಾರಿ ಸುಮಾರು 50 ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿದ್ದಾರೆ. ಇನ್ನೂ 9 ತನಿಖಾಧಿಕಾರಿಗಳು ಬೇಕು ಎಂದು ಬೇಡಿಕೆ ಸಲ್ಲಿಸಿದ್ದೇವೆ. ಈಗ ಸುಮಾರು 6,500 ಪ್ರಕರಣಗಳು ಸಲ್ಲಿಕೆಯಾಗುತ್ತಿವೆ. ನನ್ನ ವ್ಯಾಪ್ತಿಗೆ 2,500 ಪ್ರಕರಣ ಬರುತ್ತಿವೆ. ವಾರಾಹಿ ಯೋಜನೆ ಅಕ್ರಮ ಬಗ್ಗೆ ಗಮನಿಸುವುದಾಗಿ ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next