Advertisement

ಆರ್‌ಬಿಐನಿಂದ ಸರಕಾರಕ್ಕೆ 28,000 ಕೋಟಿ ರೂ.ಲಾಭಾಂಶ

12:30 AM Feb 19, 2019 | Team Udayavani |

ಹೊಸದಿಲ್ಲಿ: ಮಧ್ಯಂತರ ಡಿವಿಡೆಂಡ್‌ ರೂಪದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ 28 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರಕಾರಕ್ಕೆ ನೀಡಲಿದೆ. ಆರ್‌ಬಿಐ ಕೇಂದ್ರೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

ಆಡಿಟ್‌ ಮರುಪರಿಶೀಲನೆ ಮತ್ತು ವಿತ್ತ ಬಂಡವಾಳ ರೂಪುರೇಷೆಯನ್ನು ಅನ್ವಯಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ಎರಡನೇ ವರ್ಷವೂ ಮಧ್ಯಂತರ ಹೆಚ್ಚುವರಿ ಮೊತ್ತವನ್ನು ಸರಕಾರಕ್ಕೆ ಆರ್‌ಬಿಐ ವರ್ಗಾವಣೆ ಮಾಡುತ್ತಿದೆ. ಆರ್‌ಬಿಐ ಈ ನಿರ್ಧಾರ ಪ್ರಕಟಿಸುವುದಕ್ಕೂ ಮುನ್ನ ಕೇಂದ್ರೀಯ ಮಂಡಳಿ ಸಭೆಯನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ನಡೆಸಿದ್ದರು. ಈ ವೇಳೆ ಸರಕಾರದ ವಿವಿಧ ಸುಧಾರಣೆಗಳು ಮತ್ತು ನೀತಿ ನಿರೂಪಣೆಗಳ ವಿವರಗಳನ್ನು ಚರ್ಚಿಸಿದ್ದರು. ಆರ್‌ಬಿಐನಿಂದ ಹೆಚ್ಚುವರಿ ಮೀಸಲು ನಿಧಿಯನ್ನು ಪಡೆಯುವ ಬಗ್ಗೆ ಈ ಹಿಂದೆ ವ್ಯಾಪಕ ಚರ್ಚೆ ನಡೆದಿತ್ತು. 

21ರಂದು ಬ್ಯಾಂಕ್‌ ಮುಖ್ಯಸ್ಥರ ಸಭೆ: ಬಡ್ಡಿ ದರ ಕಡಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರದ ಮುಖ್ಯಸ್ಥರ ಜತೆಗೆ 21ರಂದು ಮಾತುಕತೆ ನಡೆಸುವುದಾಗಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next