Advertisement

ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಹಾಬಲೇಶ್ವರ ದೇಗುಲ ಹಸ್ತಾಂತರ

06:25 AM Nov 04, 2018 | Team Udayavani |

ಗೋಕರ್ಣ: ಇಲ್ಲಿನ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಸುಪ್ರೀಂಕೋರ್ಟ್‌ ಆದೇಶದಂತೆ ಸರ್ಕಾರದ ಪ್ರಭಾರ ಆಡಳಿತಾಧಿಕಾರಿ ಹಾಲಪ್ಪ ಅವರು ರಾಮಚಂದ್ರಾಪುರ ಮಠದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಅವರಿಗೆ ಹಸ್ತಾಂತರಿಸಿದರು.

Advertisement

ಸೋಮವಾರದೊಳಗಾಗಿ ಮಠಕ್ಕೆ ಆಡಳಿತ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿತ್ತು. 45 ದಿನಗಳವರೆಗೆ ದೇವಾಲಯದ ಆಡಳಿತವನ್ನು ಸರ್ಕಾರದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಹಸ್ತಾಂತರಿಸುವ ಮೂಲಕ ಈ ಹಿಂದೆ ದೇವಾಲಯದಿಂದ ವಹಿಸಿಕೊಂಡ ಚಿನ್ನಾಭರಣ, ಬೆಳ್ಳಿ ಸೇರಿ ಸಮಸ್ತ ಚರ-ಸ್ಥಿರ ಆಸ್ತಿ, ಬ್ಯಾಂಕ್‌ ಠೇವಣಿ, ವ್ಯವಹಾರ ನಡೆಸುವ ಚೆಕ್‌ ಪುಸ್ತಕಗಳು ಸೇರಿ ಎಲ್ಲವನ್ನೂ ಹಸ್ತಾಂತರಿಸಿದ್ದೇನೆಂದು ಹೇಳಿದರು.

ರಾಮಚಂದ್ರಾಪುರ ಮಠದ ದೇವಾಲಯದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಮಾತನಾಡಿ, 45 ದಿನಗಳ ಹಿಂದೆ ದೇವಾಲಯದ ಆಡಳಿತವನ್ನು ಸರ್ಕಾರ ವಹಿಸಿಕೊಂಡಿತ್ತು. ಇದೀಗ ಸುಪ್ರೀಂ ಆದೇಶದಂತೆ ಸರ್ಕಾರದ ಪ್ರತಿನಿಧಿ  ಆಡಳಿತಾಧಿಕಾರಿ ಹಾಲಪ್ಪ ಅವರು ಹಸ್ತಾಂತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಅನುಕೂಲ, ಅವಶ್ಯಕತೆ ಅರಿತು ಸ್ಪಂದಿಸಲಾಗುವುದು. ಈ ಹಿಂದಿನಂತೆ ಮಹಾಬಲೇಶ್ವರನ ಸೇವೆ ಮುಂದುವರಿಯುವುದು. ಉಪಾಧಿವಂತ ಮಂಡಳದ ಸಹಕಾರಗಳೊಂದಿಗೆ ಉತ್ತಮ ಆಡಳಿತ ನೀಡಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next