Advertisement

ಲೇಖನಿ ಮಹಿಮೆ

06:30 PM Mar 05, 2020 | mahesh |

ಲೇಖನಿಯು ಅಭಿವ್ಯಕ್ತಿಗೆ ಪೂರಕವಾಗುವ ಸಾಧನ. ಎಷ್ಟೋ ಜನರಿಗೆ ಅದು ಅನ್ನ ನೀಡುವಂತಹ ವಸ್ತು. ಕಲಾವಿದರಿಗೆ ಕುಂಚ ಹೇಗೆ ಅನ್ನ ಕೊಡುವುದೋ, ಬರಹಗಾರರಿಗೆ ಲೇಖನಿಯೇ ಅನ್ನ ಕೊಡುವುದಲ್ಲವೇ.

Advertisement

ಆದರೆ, ಇತ್ತೀಚೆಗೆ ಕಂಪ್ಯೂಟರ್‌ನ ಮೊರೆ ಹೋಗಿರುವ ಯುವಜನಾಂಗ ಬರವಣಿಗೆಯ ಆನಂದವನ್ನು ಅನುಭವಿಸುವುದಿಲ್ಲ. ಲೇಖನಿ ಅಥವಾ ಪೆನ್ನು ಹಿಡಿದು ಬರೆಯಲು ಕುಳಿತಾಗ, ತಲೆಯಲ್ಲಿ ಯೋಚನೆಗಳು ಹಂತ ಹಂತವಾಗಿ ಮೂಡುತ್ತವೆ. ಚಿಂತನೆಗಳು ತಾರ್ಕಿಕ ರೂಪು ಪಡೆಯಲು ಲೇಖನಿಯು ಪ್ರೇರಣೆ ನೀಡುತ್ತದೆ. ಕೈಬರಹವನ್ನೇ ನೋಡಿ ವ್ಯಕ್ತಿಯ ಮನಸ್ಥಿತಿಯನ್ನು ಗುರುತಿಸುವ ವಿಧಾನವೂ ಇದೆಯಂತೆ. ಒಟ್ಟಿನಲ್ಲಿ ಬರವಣಿಗೆಯ ಆನಂದವನ್ನು ಎಂದೂ ಕಳೆದುಕೊಳ್ಳಬಾರದು.

ನಯನಾ ಶೆಟ್ಟಿ
ದ್ವಿತೀಯ ಬಿಎ ಉಡುಪಿ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಟ್‌, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next