Advertisement

ವಾಮಾಚಾರಕ್ಕೆ ಬಾಲಕಿ ಬಲಿ: ಆರೋಪಿ ಬಂಧನ 

03:45 AM Mar 06, 2017 | Team Udayavani |

ಮಾಗಡಿ: ಇಲ್ಲಿನ ಸುಣ್ಣದಕಲ್ಲು ಬೀದಿಯ ಬಿ.ಅಯೇಷಾ ಎಂಬ ಬಾಲಕಿ ಯನ್ನು ಶನಿವಾರ ಅಪಹರಿಸಿ ವಾಮಾಚಾರಕ್ಕೆ ಬಲಿ ಕೊಟ್ಟು ಎಸೆದಿದ್ದ ಅದೇ ರಸ್ತೆಯ ಆರೋಪಿ ಮಹಮ್ಮದ್‌ ವಾಸಿಲ್‌ ಅನ್ನು ಮಾಗಡಿ ಪೊಲೀಸರು ಕಾರ್ಯಚರಣೆ ನಡೆಸಿ ಭಾನುವಾರ ಬಂಧಿಸಿದ್ದಾರೆ.

Advertisement

ಬಾಲಕಿಯೊಬ್ಬಳನ್ನು ಬಲಿ ನೀಡಿದರೆ ರμà ಎಂಬುವರಿಗೆ ಸ್ವಾಧೀನವಿಲ್ಲದ ಕೈ ಸರಿಯಾಗುತ್ತದೆಂಬ ಮೌಡ್ಯವನ್ನು ತುಂಬಿದ ಗೋರಿಪಾಳ್ಯದ ನಾಸೀನ್‌ತಾಜ್‌ ಮಾತನ್ನು ನಂಬಿದ ಹೊಸಮಸೀದಿ ಮುಖ್ಯಸ್ಥ ವಾಸಿಲ್‌ ಮಾ.1ರಂದು ರಾತ್ರಿ ಆಯೇಷಾಳನ್ನು ಅಪಹರಿಸಿದ್ದ. ನಾಸೀನ್‌ ತಾಜ್‌ ಮತ್ತು ರಾಷಿದ್‌ ಉನ್ನಿಸಾ ಸೇರಿ ವಾಮಾಚಾರಕ್ಕಾಗಿ ಮಗುವಿನ ಕೈ ಕಟ್ಟಿಹಾಕಿ, ಕುತ್ತಿಗೆ ಕೋಯ್ದು, ನಾಲಿಗೆ ಕತ್ತರಿಸಿ ಕೊಲೆ ಮಾಡಿದ್ದರು. ಇವರ ಜತೆ 13 ವರ್ಷದ ಬಾಲಕನೂ ಸೇರಿದ್ದಾನೆಂದು ರಾಮನಗರದ ಎಸ್‌ಪಿ. ಬಿ.ರಮೇಶ್‌ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. 

ವಾಮಾಚಾರ ಪ್ರಕರಣ ಸುದ್ದಿವಾಹಿನಿಗಳಲ್ಲಿ ಹಬ್ಬುತ್ತಿದ್ದಂತೆ ಆರೋಪಿ ಮನೆಯೆದುರು ಸಂಘಟನೆಗಳು ಜಮಾಯಿಸಿ ಆರೋಪಿ, ಕುಟುಂಬವನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ದಾಂಧಲೆ ನಡೆಸಿವೆ. ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next