Advertisement

ಜೆನರಿಕ್‌ ಔಷಧ ಮಳಿಗೆ ಉದ್ಘಾಟಿಸದೆ ವಾಪಸ್‌

05:55 AM Aug 17, 2017 | Team Udayavani |

ಚಿಕ್ಕಮಗಳೂರು: ರಾಜ್ಯ ಸರಕಾರದ ಕ್ರಮ ಖಂಡಿಸಿ ಸಂಸದೆ ಹಾಗೂ ಶಾಸಕರು ಜೆನರಿಕ್‌ ಔಷಧ ಮಳಿಗೆಯನ್ನು ಉದ್ಘಾಟಿ
ಸದೆ ವಾಪಸ್ಸಾದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.

Advertisement

ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಜೆನರಿಕ್‌ ಔಷಧ ಮಳಿಗೆ ಉದ್ಘಾಟಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಳಿಗೆ ಉದ್ಘಾಟಿ ಸಲು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಸಿ.ಟಿ.ರವಿ ಆಸ್ಪತ್ರೆ ಆವರಣಕ್ಕೆ ಬಂದಿದ್ದರು. ಆದರೆ, ಜೆನರಿಕ್‌ ಔಷಧ ಮಳಿಗೆ ಬದಲು ರಾಜ್ಯ ಸರ್ಕಾರದ ಸ್ನೇಹ ಸಂಜೀವಿನಿ ಔಷಧ ಮಳಿಗೆ ಎಂಬ ನಾಮಫಲಕ ನೋಡಿದ ತಕ್ಷಣ ಒಮ್ಮೆಲೆ ಸಿಡಿಮಿಡಿಗೊಂಡು ಇದನ್ನು ಉದ್ಘಾಟಿಸಲು ಸಾಧ್ಯವಿಲ್ಲವೆಂದು ವಾಪಸ್‌ ತೆರಳಿದರು.

ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ದಾರಿ ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಶಾಸಕ ಸಿ.ಟಿ.ರವಿ ಮಾತನಾಡಿ, ಖಾಸಗಿ ಎನ್‌ಜಿಒದೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡು ಸ್ನೇಹ ಸಂಜೀವಿನಿ ಔಷಧ ಮಳಿಗೆ ಆರಂಭಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next