Advertisement

ಬಿಜೆಪಿಯಲ್ಲಿ ಹತಾಶರ ಗುಂಪು: ಬಸವರಾಜ ಹೊರಟ್ಟಿ

07:40 AM Jun 05, 2018 | Team Udayavani |

ಚಿತ್ರದುರ್ಗ: ಅಧಿಕಾರ ಸಿಗಲಿಲ್ಲವೆಂದು ಬಿ.ಎಸ್‌.ಯಡಿಯೂರಪ್ಪ ಹತಾಶರಾಗಿದ್ದಾರೆ. ಕೇವಲ ಅವರೊಬ್ಬರೇ ಅಲ್ಲ ಅವರ ಪಕ್ಷದಲ್ಲಿರುವ ಶಾಸಕರು ಹತಾಶರಾಗಿದ್ದಾರೆ. ಬಿಜೆಪಿಯಲ್ಲಿ ಈಗ ಹತಾಶರ ಗುಂಪು ದೊಡ್ಡದಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ಪ ಮಕ್ಕಳು ನನಗೆ ತೊಂದರೆ ಕೊಟ್ಟರು ಎಂದು ಹೇಳುತ್ತ ಇಲ್ಲ ಸಲ್ಲದ ಟೀಕೆ ಮಾಡುವ ಯಡಿಯೂರಪ್ಪನವರಿಗೆ ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. 

ನಾನು ಅವರಿಂದ ಎಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎನ್ನುವುದನ್ನು ಅವರ ಎದುರೇ ಹೇಳುತ್ತೇನೆ. ನನ್ನ ಪಕ್ಕಕ್ಕೆ ಕುಳಿತು ಅದನ್ನೆಲ್ಲ ಕೇಳ್ತಾರಾ ಎಂದು ಯಡಿಯೂರಪ್ಪನವರಿಗೆ ಸವಾಲು ಹಾಕಿದರು.

ಹಿಂದಿನ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಯಡಿಯೂರಪ್ಪನವರಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದೇನೆ. ಚಿಕ್ಕ ಚಿಕ್ಕ ವಿಷಯಗಳಿಗೆ ಬಿಎಸ್‌ವೈ ಕಿರಿಕಿರಿ ಮಾಡುತ್ತಿದ್ದರು. ಒಂದೊಂದು ವಿಷಯಕ್ಕೆ ಹತ್ತಾರು ಸಲ ಅವರ ಬಳಿ ಹೋಗಬೇಕಿತ್ತು. ಆದರೂ ಸಮಸ್ಯೆ ಇತ್ಯರ್ಥವಾಗುತ್ತಿರಲಿಲ್ಲ ಎಂದು ವಾಗ್ಧಾಳಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next