Advertisement

ಅಂಬೇಡ್ಕರ್‌ ಭವನಕ್ಕೆ ಇನ್ನೂ ಬೀಳದ ಅಡಿಗಲ್ಲು!

04:58 PM Jan 29, 2022 | Team Udayavani |

ಕಾರ್ಕಳ: ತಾಲೂಕು ಕೇಂದ್ರ ಸ್ಥಾನದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಭವನ ನಿರ್ಮಾಣ ದಶಕಗಳ ಕನಸಾಗಿದೆ. ಭವನ ನಿರ್ಮಾಣಕ್ಕೆ ಇನ್ನು ಅಡಿಗಲ್ಲು ಬಿದ್ದಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದಲ್ಲಿ ಈ ಬಗ್ಗೆ ಬೇಸರವಿದೆ.

Advertisement

2016ರಲ್ಲಿ ನೀಲ ನಕ್ಷೆ ತಯಾರಿ
ನಗರದ ಕಾಬೆಟ್ಟು ವಾರ್ಡ್‌ನಲ್ಲಿ 1 ಎಕರೆ ಜಾಗವನ್ನು ತಾ| ಅಂಬೇಡ್ಕರ್‌ ಭವನಕ್ಕಾಗಿ ಮೀಸಲಿಡಲಾಗಿದೆ. ಏಳು ವರ್ಷಗಳಿಂದ ಅಂಬೇಡ್ಕರ್‌ ಭವನಕ್ಕೆ ಪ್ರಯತ್ನಗಳು ನಡೆದಿತ್ತು. 2016ರಲ್ಲಿ ನೀಲ ನಕ್ಷೆ ತಯಾರಿಸಲಾಗಿತ್ತು. ಅನಂತರದ ದಿನಗಳಲ್ಲಿ ಅಂಬೇ ಡ್ಕ ರ್‌ ಭವನ ನಿರ್ಮಾಣ ಪ್ರಯತ್ನಗಳು ನಡೆದಿದ್ದವು.

ಆರಂಭದಲ್ಲಿ 100 ಮಂದಿ ಸಾಮರ್ಥ್ಯದ ಭವನ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಸಾಲದು ಎಂದು 1 ಸಾವಿರ ಮಂದಿ ಸಾಮರ್ಥ್ಯದ ಭವನ ನಿರ್ಮಾಣಕ್ಕೆ ಯೋಜ ನೆ ಸಿದ್ಧಪಡಿಸಲಾಗಿತ್ತು. ಸುಮಾರು 750 ಮಂದಿ ಸಾಮರ್ಥ್ಯದ ಸುಸಜ್ಜಿತ ಭವನಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅಂದಾಜು ಪಟ್ಟಿ ಮತ್ತು ನಕ್ಷೆಯನ್ನು ಸಿದ್ಧಪಡಿಸಿ, ಆಡಳಿತಾತ್ಮಕ ಒಪ್ಪಿಗೆಯನ್ನು ಸರಕಾರದ ಆದೇಶದನ್ವಯ ಪಡೆಯಲಾಗಿದೆ.
2020-21ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಭವನಗಳ ನಿರ್ಮಾಣಕ್ಕೆ ಪರಿಶಿಷ್ಟ ಜಾತಿಯ ಅಭಿವೃದ್ಧಿ ಕಾರ್ಯಕ್ರಮಗಳ ಬಂಡವಾಳ ಲೆಕ್ಕ ಶೀರ್ಷಿಕೆಯಡಿ ನಿಗದಿಪಡಿಸಿದ್ದ ಅನುದಾನದ ಮೊತ್ತದಲ್ಲಿ ಕಾರ್ಕಳ ತಾ| ಅಂಬೇ ಡ್ಕ ರ್‌ ಭವನಕ್ಕೆ ಮಂಜೂರಾತಿ ಪಡೆದ 1.5 ಕೋ.ರೂ. ಅನುದಾನದ ಪೈಕಿ 75 ಲಕ್ಷ ರೂ. ಮೊದಲ ಕಂತಿನ ಹಣ ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ಖಾತೆಗೆ ಜಮೆಯಾಗಿದೆ.

ಕಾಮಗಾರಿಯೇಕೆ ವಿಳಂಬಕ್ಕೆ ಅಸಮಾಧಾನ
ವಸತಿ ಶಿಕ್ಷಣ ಸಂಸ್ಥಗಳ ಸಂಘದ ವಿಳಂಬ ನೀತಿ, ಅನಂತರದಲ್ಲಿ ಚುನಾವಣೆಗಳು ಎದುರಾದ ಹಿನ್ನೆಲೆ ಯಲ್ಲಿ ಅಂಬೇ ಡ್ಕ ರ್‌ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಿಧಾನಗತಿ ಪಡೆದುಕೊಂಡಿದ್ದವು. ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲು ಖಾತೆಯಲ್ಲಿ ಹಣ ಉಳಿದಿದ್ದರೂ ಕಾಮಗಾರಿ ಆರಂಭಿಸುವ ವಿಚಾರದಲ್ಲಿ ವಸತಿ ಶಿಕ್ಷಣ ಸಂಸ್ಥೆ ಉತ್ಸಾಹ ತೋರದೆ ಇರುವುದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಬಂದಿಯಿಲ್ಲದಿರುವುದು, ಇನ್ನಿತರ ಕಾರಣಗಳಿಂದ ವಿಳಂಬವಾಗಿರುವುದು ಸಮುದಾಯದ ಅಸಮಾ ಧಾನಕ್ಕೆ ಕಾರಣವಾಗಿದೆ.
ಆಧುನಿಕ ಅಂಬೇ ಡ್ಕ ರ್‌ ಭವನದಲ್ಲಿ ಸುಸಜ್ಜಿತ ಕಟ್ಟಡ, ವ್ಯವಸ್ಥಿತ ಪಾರ್ಕಿಂಗ್‌, ಗುಣಮಟ್ಟದ ಪೀಠೊಪಕರಣ, ನಿರಂತರ ನೀರು ಸೌಲಭ್ಯ ಹೊಂದಲು ಬೋರ್‌ವೆಲ್‌ ಇತ್ಯಾದಿ ಸೌಕರ್ಯಗಳು, ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇ ಡ್ಕ ರ್‌ ಅವರ ಪ್ರತಿಮೆಯನ್ನು ಭವನದ ಮುಂಭಾಗ ನಿರ್ಮಿಸಲು ಉದ್ದೇಶಿಸಲಾಗಿದೆ.

1.5 ಕೋ.ರೂ. ಪೈಕಿ 75 ಲಕ್ಷ ರೂ. ಅನುದಾನದ ಹಣದಲ್ಲಿ ಪ್ರಾಥಮಿಕ ಕಾಮಗಾರಿಗೆ ಆರಂಭಿಸಲು ತೊಡಕಿಲ್ಲ. ಈಗ ಕೆಲಸ ಆರಂಭಿಸಿ, ಅನಂತರದಲ್ಲಿ ಅನುದಾನ ಬಂದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಿದೆ ಎಂದು ಸಮುದಾಯದ ಮುಖಂಡರು ಹೇಳುತ್ತಿದ್ದಾರೆ.

Advertisement

ಸಚಿವರು ಸಮಯ ನಿಗದಿಪಡಿಸಿ ಒಪ್ಪಿಗೆ ನೀಡಿದಲ್ಲಿ ಈ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನಡೆದು ಸುಸಜ್ಜಿತ ಅಂಬೇ ಡ್ಕ ರ್‌ ಭವನ ನಿರ್ಮಾಣವಾಗಲಿದೆ. ನಿಟ್ಟೆ ಹಾಗೂ ಅಜೆಕಾರಿನಲ್ಲೂ ಅಂಬೇ ಡ್ಕ ರ್‌ ಭವನ ನಿರ್ಮಾಣ ಅಂತಿಮ ಹಂತದಲ್ಲಿದೆ.

ಆಧುನಿಕವಾಗಿ ನಿರ್ಮಿಸುವ ಹಂಬಲ
ಈಗಿನ 1.5 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಹಾಗೂ ಕೆಲವೊಂದು ಸೌಕರ್ಯ ಹೊಂದಲು ಸಾಧ್ಯವಿದೆ. ಈತನ್ಮಧ್ಯೆ ತಾ| ಅಂಬೇಡ್ಕರ್‌ ಭವನದ ಸಾಮರ್ಥ್ಯ ಹೆಚ್ಚಿಸಿ, ಮತ್ತಷ್ಟೂ ಸುಸಜ್ಜಿತವಾಗಿ, ಆಧುನಿಕವಾಗಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರು, ಸಚಿವರೂ ಆದ ವಿ. ಸುನಿಲ್‌ಕುಮಾರ್‌ ಹೆಚ್ಚುವರಿ ಅನುದಾನ ತರುವ ಪ್ರಯತ್ನ ನಡೆಸುತ್ತಿದ್ದು, ಡಾ| ಅಂಬೇಡ್ಕರ್‌ ಭವನವನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಲು ಉತ್ಸುಕರಾಗಿದ್ದು ಪೂರಕ ಯೋಜನೆ ಸಿದ್ಧಪಡಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮುದಾಯದ ಎಸ್‌. ಅಂಗಾರ ಅವರು ನೇಮಕವಾಗಿದ್ದು, ಅಂಬೇಡ್ಕರ್‌ ಭವನಕ್ಕೆ ವೇಗ ಸಿಗುವುದೇ ಕಾದು ನೋಡಬೇಕಿದೆ.

ಶೀಘ್ರ ಆರಂಭ
ತಾ| ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 1.5 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಆಡಳಿತಾತ್ಮಕ ಒಪ್ಪಿಗೆ ಪಡೆದು ಅದೀಗ ಟೆಂಡರ್‌ ಹಂತದಲ್ಲಿದೆ. ಟೆಂಡರ್‌ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಸಚಿವರ ಸಮಯಾವಕಾಶವನ್ನು ನಿರೀಕ್ಷಿಸಲಾಗುತ್ತಿದೆ.
-ವಿಜಯಕುಮಾರ್‌,
ಸಮಾಜ ಕಲ್ಯಾಣಾಧಿಕಾರಿ, ಕಾರ್ಕಳ

ಶಂಕುಸ್ಥಾಪನೆ ಆಗಲಿ
ಅಂಬೇಡ್ಕರ್‌ ಭವನದ ನಿರ್ಮಾಣ ಈಗಾಗಲೇ ತಡವಾಗಿದೆ. ಸಚಿವರು ಸಮಯಾವಕಾಶ ಮೀಸಲಿರಿಸಿ, ಶಂಕುಸ್ಥಾಪನೆ ನೆರವೇರಿಸಿದಲ್ಲಿ ಭವನ ಆದಷ್ಟು ಬೇಗ ನಿರ್ಮಾಣವಾಗಿ ಅನುಕೂಲವಾಗಲಿದೆ.
-ಅಣ್ಣಪ್ಪ ನಕ್ರೆ, ದಲಿತ ಮುಖಂಡ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next