Advertisement

ರಾಜ್ಯದ ಬಿಜೆಪಿ ಸರಕಾರಕ್ಕೆ ಪಂಚೇಂದ್ರೀಯಗಳು ಕೆಲಸ ಮಾಡುತ್ತಿಲ್ಲ ; ಸಿದ್ದರಾಮಯ್ಯ

10:00 AM Oct 24, 2019 | Team Udayavani |

ಗುಳೇದಗುಡ್ಡ: ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಕೇಂದ್ರದ ನಾಯಕರಿಗೆ ಬೇಕಾಗಿಲ್ಲ. ರಾಜ್ಯದಲ್ಲಿ ಇಷ್ಟು‌ ಪ್ರವಾಹ ಕೇಂದ್ರ ಸರಕಾರ ಸ್ಪಂದಿಸದೇ ಅವರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಮಾಜಿಮುಖ್ಯಮಂತ್ರಿ ಶಾಸಕ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ‌ಕಳೆದ‌ ತಿಂಗಳು ಎದುರಾದ ಪ್ರವಾಹದಿಂದ 1 ಲಕ್ಷ ಕೋಟಿ ನಷ್ಟವಾಗಿದೆ. ಆದರೆ‌ ಕೇಂದ್ರ ಸರಕಾರಕ್ಕೆ ಬಿಎಸ್ ವೈ ಬರೀ ೩೮ಸಾವಿರ ಕೋಟಿ ನಷ್ಟವಾಗಿದೆ ಅಂತಾ‌ ವರದಿ‌‌ ನೀಡಿದ್ದಾರೆ. ಅದಕ್ಕಾದರೂ ಕೇಂದ್ರ ಸರಕಾರ ಪರಿಹಾರ ನೀಡಬೇಕಲ್ಲವೇ ಬರೀ 1200ಕೋಟಿ ಪರಿಹಾ‌ರ ನೀಡುವ ಮೂಲಕ ಧೂಪ ಹಾಕುವ ರೀತಿಯಲ್ಲಿ ಪರಿಹಾರ‌ ನೀಡಿದೆ.

ರಾಜ್ಯದ ಬಿಜೆಪಿ ಸರಕಾರಕ್ಕೆ ಪಂಚೇಂದ್ರೀಯಗಳು ಕೆಲಸ ಮಾಡುತ್ತಿಲ್ಲ. ಕೇಂದ್ರದ ನಾಯಕರಿಗೆ ಗಟ್ಟಿ ಧ್ವನಿಯಲ್ಲಿ ‌ಪರಿಹಾರ ಕೇಳುವ ಧೈರ್ಯವನ್ನು ಯಡಿಯೂರಪ್ಪ ಮಾಡುತ್ತಿಲ್ಲ. ನಮ್ಮನ್ನು ಕರೆಯಿರಿ ನಾವು ಕೇಂದ್ರದವರಿಗೆ‌ ಕೇಳುತ್ತೇವೆ ಎಂದು ಹೇಳಿದರೂ ನಮನ್ನು ಕರೆಯುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಬಾದಾಮಿ ಕ್ಷೇತ್ರದ ಜನರ ಪುಣ್ಯ ನಾನು‌ ವಿಪಕ್ಷ ನಾಯಕನಾಗಿದ್ದೇನೆ ಇಲ್ಲದಿದ್ದರೆ ‌ಮನೆಯಲ್ಲಿರುತ್ತಿದ್ದೇ. ನೀವು‌ ಸೋಲಿಸಿಬಿಟ್ಟಿದ್ದರೆ ನಾನು ವಿಪಕ್ಷನಾಗುತ್ತಿರಲಿಲ್ಲ. ಕಾಯಾ ವಾಚಾ ಮನಸಾ ನಾನು ಬಾದಾಮಿ‌ ಕ್ಷೇತ್ರದ ಹಾಗೂ ರಾಜ್ಯದ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next