Advertisement

ಶಾಂಭವಿಯಲ್ಲಿ ಈ ಮಳೆಗಾಲದ ಮೊದಲ ನೆರೆ

11:19 PM Jul 19, 2019 | Sriram |

ಬೆಳ್ಮಣ್‌: ಈ ವರ್ಷ ಆರ್ದ್ರಾ ಪುನರ್ವಸು ನಕ್ಷತ್ರಗಳಲ್ಲಿ ಮಳೆ ಕೊರತೆಯಾಗಿದ್ದರೂ, ಶುಕ್ರವಾರ ಪ್ರಾರಂಭಗೊಂಡ ನಕ್ಷತ್ರದ ಮಳೆಗೆ ಶಾಂಭವಿಯಲ್ಲಿ ಮೊದಲ ನೆರೆ ಬಂದಿದೆ.

Advertisement

ಕಳೆದ ವಾರ ಒಂದಿಷ್ಟು ಮಳೆಯಾಗಿದ್ದರಿಂದ ಮುಂಡ್ಕೂರು- ಸಂಕಲಕರಿಯದಲ್ಲಿ ಹರಿವ ಶಾಂಭವಿ ನದಿ ಒಂದಷ್ಟು ತುಂಬಿತ್ತು. ಗುರುವಾರ ರಾತ್ರಿಯಿಂದ ಮಳೆ ಬಿರುಸುಕೊಂಡಿದ್ದು, ಶುಕ್ರವಾರದ ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಭರ್ತಿಯಾಗಿ ನದಿಯೂ ತುಂಬಿ ಹರಿಯಿತು.

ಸಣ್ಣ ಮಟ್ಟಿನ ನೆರೆಯೂ ಬಂದಿದೆ. ಕಳೆದ ವರ್ಷ ಇದೇ ಸಂದರ್ಭ ಕುಂಭದ್ರೋಣ ಮಳೆಯಿಂದಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು.

ಕೃಷಿ ಕಾರ್ಯ ಇನ್ನೂ ಮುಗಿದಿಲ್ಲ
ಕೇವಲ ಮಳೆಯ ನೀರನ್ನೇ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿರುವ ಕರಾವಳಿಯ ಹಲವಾರು ರೈತರ ಕೃಷಿ ಕೆಲಸಗಳು ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಸುರಿಯುತ್ತಿರುವ ಮಳೆ ಭರವಸೆ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next