Advertisement

ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರ: ಮಾರಕಾಸ್ತ್ರಗಳಿಂದ ಹೊಡೆದಾಟ

10:29 AM Oct 09, 2019 | keerthan |

ವಿಜಯಪುರ: ನವರಾತ್ರಿ ದೇವಿ ಮೂರ್ತಿ ಎದುರು ಡಾನ್ಸ್ ವಿಚಾರದಲ್ಲಿ ಯುವಕರ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು, ಮಾರಕಾಸ್ತ್ರಗಳಿಂದ ಹೊಡೆದಾಟ ಮಾಡಿಕೊಂಡು ಇಬ್ಬರು ಗಾಯಗೊಂಡ ಘಟನೆ ಜರುಗಿದೆ.

Advertisement

ವಿಜಯಪುರ ನಗರದ ಆಶ್ರಮ ಬಳಿಯ ಪಾರೇಖ ನಗರದ ಪುಡಾರಿ ಯುವಕರು ಸೋಮವಾರ ರಾತ್ರಿ 8 ಗಂಟೆ ಸುಮರಿಗೆ ದೇವರ ಮುಂದೆ ಹಾಡಿಗೆ ತಕ್ಕಂತೆ ಕುಣಿಯವ ವಿಷಯದಲ್ಲಿ ನಡೆದ ಜಗಳವೇ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಳ್ಳಲು ಕಾರಣವಾಗಿದೆ.

ಘಟನೆಯಲ್ಲಿ ಜಗಳ ಬಿಡಿಸಲು ಬಂದ ರಮೇಶ ಮೇತ್ರಿ ಎಂಬ 35 ವರ್ಷದ ಯುವಕನ ಮೇಲೆ ಹಾಗೂ ಓರ್ವ ಬಾಲಕನ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ್ದರಿಂದ ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ಬು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕರ ಗುಂಪು ಮಾರಕಾಸ್ತ್ರ ಗಳಿಂದ ಹೊಡಿದಾಡಿಕೊಂಡ ದೃಶ್ಯ ಸಿ.ಸಿ. ಟಿವಿ ಕೆಮೆರಾದಲ್ಲಿ ದಾಖಲಾಗಿದೆ. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next