Advertisement

ಪೈರಸಿ ವಿರುದ್ಧದ ಹೋರಾಟ ಮುಂದುವರೆಯುತ್ತದೆ: ಸುದೀಪ್‌

08:37 PM Mar 17, 2020 | Lakshmi GovindaRaju |

“ಪೈಲ್ವಾನ್‌’ ಚಿತ್ರ ಪೈರಸಿಯಾದ ವಿರುದ್ಧ ಸುದೀಪ್‌ ಸಿಟ್ಟಾಗಿದ್ದು, ಪೈರಸಿ ವಿರುದ್ಧ ಹೋರಾಟಕ್ಕಿಳಿದಿದ್ದು ನಿಮಗೆ ಗೊತ್ತೇ ಇದೆ. ಈಗ ಸುದೀಪ್‌ ಮತ್ತೆ ಪೈರಸಿ ವಿರುದ್ಧ ಸಿಟ್ಟಾಗಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸುದೀಪ್‌, “ಪೈರಸಿ ಹಾಗೂ ಬಂಧನದ ಕುರಿತಾಗಿ ಕೇಳುತ್ತಿರುವವರಿಗಾಗಿ… ಪೈರಸಿ ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನಗಳು ನಡೆಯುತ್ತಿರುವಂತೆ ಕಾಣುತ್ತಿದೆ.

Advertisement

ಬೆಂಬಲಕ್ಕಾಗಿ ಎಂಎಲ್‌ಸಿ ಒಬ್ಬರಿಂದ ಕರೆ ಮಾಡಿಸುವ ಅನಿವಾರ್ಯತೆ ಇದೆಯಾ? ಸ್ನೇಹಿತರ ಹಾಗೂ ಹಿತೈಷಿಗಳು ನನ್ನ ಪರವಾಗಿ ಇರುವಾಗ ಅದರ ಅಗತ್ಯ ಇಲ್ಲವೆಂದು ಭಾವಿಸಿದ್ದೇನೆ. ಪೈರಸಿ ವಿರುದ್ಧದ ಹೋರಾಟ ಮುಂದುವರೆಯುತ್ತದೆ. ಆ ವಿಚಾರದಲ್ಲಿ ಸುಮ್ಮನಾಗುವ ಪ್ರಶ್ನೆಯೇ ಇಲ್ಲ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ. ಸದ್ಯ ಸುದೀಪ್‌ ಪೋಲೆಂಡ್‌ನ‌ಲ್ಲಿ “ಕೋಟಿಗೊಬ್ಬ-3′ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next