Advertisement

Crime: ಮಗಳನ್ನೇ ಕೊಲೆಗೈದು ಬೈಕಿಗೆ ಕಟ್ಟಿ ದರದರನೆ ಎಳೆದೊಯ್ದ ಪಾಪಿ ತಂದೆ!

07:30 PM Aug 11, 2023 | Team Udayavani |

ಅಮೃತ್‌ಸರ: ಯುವಕನೊಬ್ಬನನ್ನು ಪ್ರೀತಿಸಿದ ಕಾರಣಕ್ಕೆ ಕೋಪಗೊಂಡ ತಂದೆ ತನ್ನ 16 ವರ್ಷ ಪ್ರಾಯದ ಮಗಳನ್ನು ಕೊಂದು ಬೈಕಿಗೆ ಕಟ್ಟಿ ರೈಲ್ವೇ ಹಳಿಯ ಬಳಿ ಎಳೆದೊಯ್ದ ದಾರುಣ ಘಟನೆ ಪಂಜಾಬ್‌ನ ಅಮೃತ್‌ಸರದ ಮುಚ್ಚಲ್‌ ಗ್ರಾಮದಲ್ಲಿ ನಡೆದಿದೆ.

Advertisement

ತಂದೆ ಮಗಳ ದೇಹವನ್ನು ಬೈಕಿಗೆ ಕಟ್ಟಿ ರಸ್ತೆಯಲ್ಲೇ ವೇಗವಾಗಿ ಎಳೆದೊಯ್ಯುವ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಕಳೆದ ಎರಡು ದಿನಗಳಿಂದ ಮನೆಗೆ ಬಾರದೇ ನಾಪತ್ತೆಯಾಗಿದ್ದ ಆಕೆ ಗುರುವಾರ ಮನೆಗೆ ಹಿಂದಿರುಗಿದ್ದಾಳೆ. ಆಕೆಯ ಶೀಲದ ಬಗ್ಗೆ ಸಂಶಯಪಟ್ಟ ಆಕೆಯ ತಂದೆ ಕ್ರೋಧದಿಂದ ಆಕೆಯ ತಲೆಕೂದಲು ಹಿಡಿದು ಮನೆಯಿಂದ ಎಳೆದೊಯ್ದು ಹರಿತ ಆಯುಧದಿಂದ ಆಕೆಯನ್ನು ಇರಿದು ಕೊಂದಿದ್ದಾನೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಬಳಿಕ ತನ್ನ ಬೈಕ್‌ಗೆ ಆಕೆಯ ದೇಹವನ್ನು ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ರೈಲ್ವೇ ಹಳಿಯ ಬಳಿ ಬೈಕ್‌ ನಿಲ್ಲಿಸಿದ್ದಾನೆ. ಬೈಕ್‌ನಲ್ಲಿ ಆಕೆಯನ್ನು ಎಳೆದೊಯ್ಯುತ್ತಿರುವ ದೃಶ್ಯವನ್ನು ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ʻಕೊಲೆಯಾದ ಬಾಲಕಿಯ ದೇಹವನ್ನು ಆಕೆಯ ತಂದೆಯೇ ಎಳೆದುಕೊಂಡು ಹೋಗಿದ್ದಾನೆ. ಆಕೆಯ ತಂದೆಯನ್ನು ನಾವು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದೇವೆ. ಇದೊಂದು ಮರ್ಯಾದಾ ಹತ್ಯೆಯಾಗಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕೊಲೆಗಡುಕ ತಂದೆಯ ವಿರುದ್ಧ ಆತನ ಕುಟುಂಬದವರು ದೂರು ದಾಖಲಿಸಲು ಒಪ್ಪಿಲ್ಲʼ ಎಂದು ಅಮೃತ್‌ಸರ್‌ ಗ್ರಾಮಾಂತರ ಠಾಣೆಯ SSP ಸತೀಂದರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ: BBMP ಕಚೇರಿಯಲ್ಲಿ ಅಗ್ನಿ ಅವಘಡ ; ಹಲವು ಸಿಬಂದಿಗಳಿಗೆ ಗಂಭೀರ ಗಾಯ

 

Advertisement

Udayavani is now on Telegram. Click here to join our channel and stay updated with the latest news.

Next