Advertisement

ರೈತರ ಕಷ್ಟ ಜೆಡಿಎಸ್‌ನಿಂದ ನಿವಾರಣೆ

03:45 PM Apr 09, 2018 | Team Udayavani |

ಗುರುಮಠಕಲ್‌: ಚುನಾವಣೆಯಲ್ಲಿ ವಿವಿಧ ಪಕ್ಷಗಳು ನೀಡುವ ಹಣದಿಂದ ನಿಮ್ಮ ಕುಟುಂಬದ ಸಮಸ್ಯೆ ನಿವಾರಣೆಯಾಗಲ್ಲ. ಅದು ಒಂದು ದಿನ ಅಥವಾ ಎರಡು ದಿನದಲ್ಲಿ ಖರ್ಚಾಗುತ್ತದೆ. ಆದ್ದರಿಂದ ಜೆಡಿಎಸ್‌ ಗೆಲ್ಲಿಸಿ ಕುಟುಂಬ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ ಎಂದು ರಾಜ್ಯ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.

Advertisement

ಗುರುಮಠಕಲ್‌ ನಗರದಲ್ಲಿ ಹಮ್ಮಿಕೊಂಡ ಜೆಡಿಎಸ್‌ ಕುಮಾರಪರ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಜೆಡಿಎಸ್‌ ಅಭ್ಯರ್ಥಿಯಾದ ನಾಗನಗೌಡ ಕಂದಕೂರು ಅವರನ್ನು ಆಯ್ಕೆ ಮಾಡಿದರೆ, ನಿಮ್ಮ ಊರಿನ ಮುಖಂಡರೊಬ್ಬರು ರಾಜ್ಯದ ಪ್ರಮುಖ ಮಂತ್ರಿಯಾಗಲಿದ್ದಾರೆ ಎಂದು ಅವರು ಜನರಿಗೆ ಭರವಸೆ ನೀಡಿದರು.

ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದ ಭವಿಷ್ಯ ಬದಲಾಯಿಸುವ ಶಕ್ತಿ ನಿಮ್ಮಲ್ಲಿದೆ. ಪ್ರಾದೇಶಿಕ ಪಕ್ಷಕ್ಕೆ ಒಂದು ಅವಕಾಶ ನೀಡಿ, ನಿಮ್ಮೆಲ್ಲರ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಹೇಳಿದ ಏಕೈಕ ನಾಯಕ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಮಾಡಿ ನಾಡಿನ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಕರೆ ನೀಡಿದರು. 

ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಮಾತನಾಡಿ, ರಾಜ್ಯದ ಅಭಿವೃದ್ಧಿಗಾಗಿ ನಡೆಯುತ್ತಿರುವ ಈ ಕುಮಾರ ಪರ್ವ ಗುರುಮಠಕಲ್‌ ಬದಲಾವಣೆಯ ಪರ್ವದಿಂದ ಪ್ರಾರಂಭವಾಗಲಿ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಿ.ಎಂ.ಫಾರೂಕ್‌, ಕೇದಾರಲಿಂಗಯ್ಯ, ತಮ್ಮಣ್ಣ, ಬಂಡೆಪ್ಪ ಕಾಶಂಪೂರ್‌, ಆರ್‌. ಮುನಿಯಪ್ಪ, ರಾಜ್ಯ ಯುವ ಘಟಕದ ಕಾರ್ಯದರ್ಶಿ ಶರಣಗೌಡ ಕಂದಕೂರ್‌, ಜಿ. ತಮ್ಮಣ್ಣ, ಯುವ ಘಟಕದ ಜಿಲ್ಲಾಧ್ಯಕ್ಷ ಶೇಖರಗೌಡ ವಡಿಗೇರಾ, ಅಮೀನರೆಡ್ಡಿ ಯಾಳಗಿ, ಮೋಹ್ಮದ್‌ ಅಸೀಮ್‌, ಶರಣು ಅವುಂಟಿ, ಕಿಷ್ಟರೆಡ್ಡಿ ಪೊಲೀಸ್‌ ಪಾಟೀಲ್‌, ನಾಗೇಶ್‌ ಚಂಡರಿಕಿ, ಕೆ.ಬಿ. ವಾಸು ಮಲ್ಲಿಕಾರ್ಜುನ ಅರುಣಿ
ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next