Advertisement

ಸಾಲಬಾಧೆಗೆ ನೊಂದು ಸಾವಿಗೆ ಶರಣಾದ ರೈತ

11:58 AM Jun 18, 2017 | Team Udayavani |

ಯಲಹಂಕ: ಸಾಲ ಬಾಧೆ ತಾಳರಾದರೆ ರೈತರೊಬ್ಬರು ವಿಷ ಸೇವಿಸಿ ಸಾವಿಗೀಡಾಗಿರುವ ಘಟನೆ ಬೆಂಗಳೂರು ನಗರ ಹೊರ ವಲಯದ ಹೆಸರಘಟ್ಟ ಹೋಬಳಿಯ ಹನಿಯೂರು ಗ್ರಾಮದಲ್ಲಿ ನಡೆದಿದೆ.  ರಾಮೇಗೌಡ(38) ಮೃತ ರೈತ. ಕಳೆದ ಮೂರು ದಿನಗಳ ಹಿಂದೆ ಕ್ರಿಮಿ ನಾಶಕ ಸೇವಿಸಿದ್ದ ರಾಮೇಗೌಡ ಅವರು ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Advertisement

ಚಿಕಿತ್ಸೆ ಫ‌ಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಂಗಳೂರು ಉತ್ತರ ಅಪರ ತಾಲ್ಲೂಕಿನ ದಂಡಾಧಿಕಾರಿ ಮಂಜುನಾಥ್‌ ದೊಡ್ಡಬಳ್ಳಾಪುರ ವೃತ್ತ ಡಿವೈಎಸ್‌ಪಿ ನಾಗರಾಜು, ರಾಜಾನುಕುಂಟೆ ಸಬ್‌ ಇನ್ಸ್‌ಪೆಕ್ಟರ್‌ ಮಧುಕರ್‌ ಭೇಟಿ ನೀಡಿ ಪರಿಶೀಲಿಸಿದರು. ರಾಮೇಗೌಡ ಅವರು ಮೂರು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿ ಕೃಷಿ ಕಾರ್ಯ ಕೈಗೊಂಡಿದ್ದರು.

ಎರಡು ವರ್ಷಗಳ ಹಿಂದೆ ಕೊಳವೆ ಬಾವಿ ಬತ್ತಿತ್ತು. ಬೇರೆಯವರ ಕೊಳವೆಬಾವಿಯಿಂದ ನೀರು ಪಡೆದು ಬೆಳೆ ಬೆಳೆದಿದ್ದ ರಾಮೇಗೌಡ ಅವರು, ಬೆಳೆಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರದ ಫೆಡರಲ್‌ ಮೊಗಲ್‌ ಬ್ಯಾಂಕಿನಲ್ಲಿ ರಾಮೇಗೌಡ ಅವರು 2.5ಲಕ್ಷ ರೂ ಸಾಲ ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next