Advertisement

ಗಾಳಿಗೆ ಉರುಳಿಬಿದ್ದ ಸ್ವಾಗತ ಕಮಾನು

04:18 PM Jul 21, 2018 | |

ಮಂಡ್ಯ: ಮತದಾರರಿಗೆ ಕೃತಜ್ಞತೆ ಅರ್ಪಿಸಲು ನಗರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಲು ಹಾಕಿದ್ದ ಕಮಾನು ಉರುಳಿಬಿದ್ದ ಘಟನೆ ನಗರದ ಜಯಚಾಮರಾಜೇಂದ್ರ ಒಡೆಯರ್‌ ವೃತ್ತದಲ್ಲಿ ನಡೆದಿದೆ. ಜನಸಂಚಾರವಿಲ್ಲದಿದ್ದ ಕಾರಣ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದಂತಾಗಿದೆ.

Advertisement

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ತೆರಳುವ ಮಾರ್ಗದಲ್ಲಿರುವ ಜಯಚಾಮರಾಜೇಂದ್ರ ವೃತ್ತದಲ್ಲಿ
ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಕಬ್ಬಿಣದ ಕಂಬಿಗಳಿಂದ ಕೂಡಿದ ಬೃಹತ್‌ ಸ್ವಾಗತ ಕಮಾನನ್ನು ಅಳವಡಿಸಿ ಅದಕ್ಕೆ ಫ್ಲೆಕ್ಸಗಳನ್ನು ಅಳವಡಿಸಲಾಗಿತ್ತು. ಬೆಳಗ್ಗೆ  11.15ರ ವೇಳೆಗೆ ಬೀಸಿದ ಭಾರೀ ಗಾಳಿಯಿಂದ ಸ್ವಾಗತ ಕಮಾನು ಆಧಾರ ಕಳಚಿಕೊಂಡು ಕುಸಿದುಬಿದ್ದಿದೆ. ಈ ಮಾರ್ಗದ ರಸ್ತೆಯು ಸದಾ ಜನನನಿಬಿಡ ಹಾಗೂ ವಾಹನಗಳ ಸಂಚಾರದಿಂದ ಕೂಡಿರುತ್ತದೆ. ಅದೃಷ್ಟವಶಾತ್‌ ಕಮಾನು ಕುಸಿದು ಬೀಳುವ ಸಮಯದಲ್ಲಿ ಜನ ಮತ್ತು ವಾಹನಸಂಚಾರವಿರ ಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಕುಸಿದುಬಿದ್ದ ಸ್ವಾಗತ ಕಮಾನನ್ನು ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಅಲ್ಲಿಂದ ತೆರವುಗೊಳಿಸಿದರು. ಮತ್ತೆ ಅದನ್ನು ಪುನರ್‌ ಪ್ರತಿಷ್ಠಾಪಿಸುವುದಕ್ಕೆ ಅವಕಾಶ ನೀಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next