Advertisement

ಕಣ್ಣು ಮನುಷ್ಯನ ದೇಹದ ಸೂಕ್ಷ್ಮ ಅಂಗ

04:26 PM Jan 30, 2021 | Team Udayavani |

ಜಗಳೂರು: ಕಣ್ಣು ಮನುಷ್ಯನ ದೇಹದ ಸೂಕ್ಷ್ಮ ಅಂಗವಾಗಿದ್ದು, ಪ್ರತಿಯೊಬ್ಬರೂ ಕಾಳಜಿಯಿಂದ ರಕ್ಷಣೆ ಮಾಡಿಕೊಳ್ಳಬೇಕು. ಉಚಿತ ನಡೆಯುವ ಶಿಬಿರಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಅಂಧತ್ವ ನಿಯಂತ್ರಣ ಅ ಧಿಕಾರಿ ಡಾ.ಮುರಳಿಧರ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ, ಎಂಆರ್‌ ಟಿ ಕಣ್ಣಿನ ಆಸ್ಪತ್ರೆ, ಪ್ರೇರಣ ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು, ದೇಹದಲ್ಲಿ ಅತೀ ಸೂಕ್ಷ್ಮ ಅಂಗ ಕಣ್ಣಾಗಿದ್ದು, ಇದರ ಬಗ್ಗ ಪ್ರತಿಯೊಬ್ಬರು ಜಾಗೃತಿ ವಹಿಸಬೇಕು. ಶಿಬಿರಗಳಲ್ಲಿ ತಜ್ಞರಿಂದ ಕಣ್ಣಿನ ದೋಷಗಳಿಗೆ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು ಎಂದರು.

ಇದನ್ನೂ ಓದಿ:ಮಹಾರಾಷ್ಟ್ರ ಬಸ್‌ಗೆ ಮಸಿ ಬಳಿದ ಸೇನೆ

ಟಿಎಚ್‌ಒ ಡಾ.ನಾಗರಾಜ್‌, ನೇತ್ರ ತಜ್ಞ ಪರಮೇಶ್ವರಪ್ಪ, ಡಾ.ಸಹನಾ, ಎಂಆರ್‌ಟಿ ಆಸ್ಪತ್ರೆಯ ವೈದ್ಯಾಧಿ ಕಾರಿ ನಾಗರಾಜ್‌, ಪ್ರೇರಣ ಟ್ರಸ್ಟ್‌ನ ವಿಲಿಯಂ ಮಿರಾಂದ, ವಿಲಿಯಂ ಸುನೀಲ್‌, ಪಿಎಸ್‌ ಅರವಿಂದನ್‌, ಕಂಬಣ್ಣ, ವೀರೇಶ್‌ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next