Advertisement

ಮತ್ಸ್ಯಗಂಧ ಎಕ್ಸಪ್ರೆಸ್ ನಲ್ಲಿ ಕಳ್ಳತನ

05:33 PM Nov 05, 2021 | Team Udayavani |

ಪಣಜಿ: ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಪನವೇಲ್‍ನಿಂದ ಉಡುಪಿಗೆ ಪ್ರಯಾಣ ಬೆಳೆಸುತ್ತಿದ್ದ ಮಹಿಳೆಯೋರ್ವಳ ಬಳಿಯಿದ್ದ 6 ಲಕ್ಷ ರೂ ಮೌಲ್ಯದ ಬಂಗಾರ ಮತ್ತು 50,000 ರೂ ಹಣ ಕಳ್ಳತನ ನಡೆದಿರುವುದಾಗಿ ಕೊಂಕಣ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಈ ಕುರಿತಂತೆ ಜೋ ಅಲ್ವಿನ್ ಮಾರ್ಟೀನ್ ರವರು ಕೊಂಕಣ ರೈಲ್ವೆ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತಮ್ಮ ಕುಟುಂಬದೊಂದಿಗೆ ಮಾರ್ಟಿನ್ ರವರು ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಪನವೇಲ್‍ನಿಂದ ಉಡುಪಿಗೆ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ:- ಬಾಂಬ್ ರೀತಿ ಸ್ಪೋಟಗೊಂಡ ಪಟಾಕಿ : ತಂದೆ, ಮಗ ಛಿದ್ರ ಛಿದ್ರ

ಈ ಸಂದರ್ಭದಲ್ಲಿ ಮಾರ್ಟಿನ್ ರವರ ತಾಯಿಯ ಕೈಯ್ಯಲ್ಲಿದ್ದ ಬ್ಯಾಗ್‍ನ್ನು ಅಪರಿಚಿತ ವ್ಯಕ್ತಿಯೊಬ್ಬ ಕದ್ದು ಪರಾರಿಯಾದ. ಈ ಬ್ಯಾಗ್‍ನಲ್ಲಿ ಸುಮಾರು 6 ಲಕ್ಷ ರೂ ಮೌಲ್ಯದ ಬಂಗಾರ ಮತ್ತು 50,000 ರೂ ಹಣವಿತ್ತು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಂಕಣ ರೈಲ್ವೆಯ ಪೋಲಿಸ್ ನಿರೀಕ್ಷಕ ಹೀರೂ ಕವಳೇಕರ್ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next