Advertisement

ಎಂಜಿನಿಯರ್‌ ಬಳಿ ಇತ್ತು 1.1 ಕೆಜಿ ಚಿನ್ನ !

12:46 PM Apr 12, 2018 | Team Udayavani |

ಕುಂದಾಪುರ: ಎಸಿಬಿ ದಾಳಿಗೊಳಗಾದ ಇಲ್ಲಿನ ತಾಲೂಕು ಪಂಚಾಯತ್‌ ಸಹಾಯಕ ಎಂಜಿನಿಯರ್‌ ರವಿಶಂಕರ್‌ ಅವರ ಲಾಕರ್‌ನಲ್ಲಿ ಇದ್ದುದು ಬರೋಬ್ಬರಿ 1.1 ಕೆಜಿ ಚಿನ್ನ ಮತ್ತು 18 ಲಕ್ಷ ರೂ. ನಗದು!

Advertisement

ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ ಆಪಾದನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸ್‌ಪಿ ಶ್ರುತಿ ಅವರ ತಂಡದಿಂದ ಮಂಗಳವಾರ ದಾಳಿಗೆ ಒಳಗಾದ  ನಾನಾ ಸಾಹೇಬ್‌ ರಸ್ತೆಯ ರವಿಶಂಕರ್‌ ಅವರ ಮನೆಯಿಂದ 224 ಗ್ರಾಂ ಚಿನ್ನ ಹಾಗೂ 50,000 ರೂ. ನಗದು ವಶಪಡಿಸಿಕೊಳ್ಳಲಾಗಿತ್ತು. ಆಸ್ತಿಯ ದಾಖಲೆ ಪತ್ರಗಳು ದೊರೆತಿವೆ.

ಕಾರ್ಯಾಚರಣೆ ಮುಂದುವರಿಸಿ ಬುಧವಾರ ಉಡುಪಿಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನವನ್ನು ವಶಕ್ಕೆ ತೆಗೆದು ಕೊಳ್ಳಲಾಯಿತು. ಒಟ್ಟು 18,79,141 ರೂ. ನಗದು ಹಾಗೂ 1 ಕೆಜಿ 113 ಗ್ರಾಂ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸಿಬಿ ಎಸ್‌ಪಿ ಶ್ರುತಿ ಅವರು “ಪತ್ರಿಕೆ’ಗೆ ಮಾಹಿತಿ ನೀಡಿದ್ದಾರೆ.
ರವಿಶಂಕರ್‌ ಮೂಲತಃ ಕುಂದಾ ಪುರದವರೇ ಆಗಿದ್ದು 1989ರಲ್ಲಿ ವೃತ್ತಿಗೆ ಸೇರಿದಂದಿನಿಂದ ಈವರೆಗೂ ಕುಂದಾಪುರ ತಾ.ಪಂ.ನಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಸಿಬಿ ತಂಡ ರವಿಶಂಕರ್‌ ಅವರ ಮನೆ, ಕಚೇರಿ, ಹೊನ್ನಾವರದ ಮಾವನ ಮನೆಗೆ ದಾಳಿ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next