Advertisement

ಮುಂಡ್ಕೂರು ಜಾರಿಗೆಕಟ್ಟೆ ಬಳಿ ಚುನಾವಣ ಚೆಕ್‌ ಪೋಸ್ಟ್‌ ಕಾರ್ಯಾರಂಭ

01:39 AM Apr 08, 2019 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಗಡಿ ಭಾಗದ ಮುಂಡ್ಕೂರು ಜಾರಿಗೆಕಟ್ಟೆಯ ಬಳಿ ಲೋಕಸಭಾ ಚುನಾವಣೆಯ ನಿಮಿತ್ತ ಚೆಕ್‌ ಪೋಸ್ಟ್‌ ಕಳೆದ ಶುಕ್ರವಾರದಿಂದ ಪ್ರಾರಂಭಗೊಂಡಿದ್ದು ಇನ್ನು ದಕ್ಷಿಣ ಕನ್ನಡದಿಂದ ಈ ಭಾಗದಲ್ಲಿ ಉಡುಪಿ ಪ್ರವೇಶಿಸುವ ಹಾಗೂ ನಿರ್ಗಮಿಸುವ ಪ್ರತಿ ಯೊಂದು ವಾಹನಗಳೂ ಭಾರೀ ತಪಾ ಸಣೆಗೆ ಒಳಪಡುತ್ತವೆ.

Advertisement

ಸಿಬಂದಿ ಬದಲಾವಣೆ
ಪೊಲೀಸ್‌, ತೋಟಗಾರಿಕೆ , ಕಂದಾಯ ಸಹಿತ ವಿವಿಧ ಇಲಾಖೆಗಳ ಅಧಿಕಾರಿ ಗಳನ್ನೊಳಗೊಂಡ ತಂಡ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲಿದ್ದು ದಿನದ 3 ಪಾಳಿಗಳಲ್ಲಿ ಸಿಬಂದಿ ಬದಲಾವಣೆ ಗೊಳ್ಳಲಿದ್ದಾರೆ ಎಂದು ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಚೆಕ್‌ ಪೋಸ್ಟ್‌ನಲ್ಲಿ ಮೂರು ಸಿಸಿ ಕೆಮರಾ ಆಳವಡಿಸಲಾಗಿದು,ª ನೇರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಇಲ್ಲಿನ ಆಗು ಹೋಗುಗಳ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಭೇಟಿ
ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ತೆರೆದಿರುವ ಚೆಕ್‌ ಪೋಸ್ಟ್‌ ಗೆ ಕಾರ್ಕಳ ಸಹಾಯಕ ಚುನಾವಣಾಧಿಕಾರಿ ಸಂತೋಷ್‌ ಕುಮಾರ್‌ ಶುಕ್ರವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕಾರ್ಕಳ ತಹಶೀಲ್ದಾರ್‌ ಪುರಂದರ್‌, ಹೆಬ್ರಿ ತಹಶೀಲ್ದಾರ್‌ ಮಹೇಶ್ಚಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next