Advertisement

ಜಿಲ್ಲೆಗೆ ಬೇಕು 19,428 ಕ್ವಿಂಟಲ್‌ ಬಿತ್ತನೆ ಬೀಜ

03:03 PM May 07, 2020 | mahesh |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ಮಳೆ ಶುಭಾರಂಭ ಮಾಡುತ್ತಿದ್ದಂತೆ ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು, ಹಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಭೂಮಿಯನ್ನು ಹದ ಮಾಡಿಕೊಂಡಿದ್ದ ರೈತರು ಇದೀಗ ಸದ್ದಿಲ್ಲದೇ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದು, ಜಿಲ್ಲೆಗೆ ಬರೋಬ್ಬರಿ 19,428 ಕ್ವಿಂಟಲ್‌ ಬಿತ್ತನೆ ಬೀಜ ಅವಶ್ಯಕವಾಗಿದೆ. ಜಿಲ್ಲಾದ್ಯಂತ ಈ ವರ್ಷ 1.40 ಲಕ್ಷ ಹೆಕ್ಟೇರ್‌ ಭೂ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಯ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದು ವಾಡಿಕೆಯಂತೆ ರೈತರು ಆರಂಭದ ಬೆಳೆಯಾಗಿ ನೆಲಗಡಲೆ ಬಿತ್ತನೆಗೆ ಮುಂದಾಗಿದ್ದಾರೆ. ಜಿಲ್ಲೆಗೆ ನೆಲಗಡಲೆ ಮಾತ್ರ 9,438 ಕ್ವಿಂಟಲ್‌ನಷ್ಟು ಅವಶ್ಯಕವಾಗಿದೆ.

Advertisement

26 ಸಾವಿರ ಹೆಕ್ಟೇರ್‌ ಪ್ರದೇಶ: ಜಿಲ್ಲೆಯಲ್ಲಿ ನೀರಾವರಿ ಇಲ್ಲದ ರೈತರು ನೆಲಗಡಲೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುವುದರಿಂದ ನೆಲಗಡಲೆ ಬೆಳೆಯುವ ರೈತರ
ಸಂಖ್ಯೆ ಅಧಿಕವಾಗಿದೆ. ರಾಗಿ, ಮುಸುಕಿನ ಜೋಳ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಮೂರನೇ ಅತಿದೊಡ್ಡ ಬೆಳೆಯಾಗಿ ನೆಲಗಲಡೆ ಬೆಳೆಯುತ್ತಾರೆ. ಈ ವರ್ಷ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಸುಮಾರು 26 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಪ್ರದೇಶ ಗುರುತಿಸಿದೆ. ಜಿಲ್ಲೆಗೆ ಅವಶ್ಯಕ ವಾದ 19,428 ಕ್ವಿಂಟಲ್‌ನಷ್ಟು ವಿವಿಧ ಬಿತ್ತನೆ ಬೀಜ ಅವಶ್ಯಕವಾಗಿದ್ದು ಆ ಪೈಕಿ 4,569 ಕ್ವಿಂಟಲ್‌ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಜಿಲ್ಲೆಯ ರೈತರು ಬಿತ್ತನೆ ಬೀಜ ಕ್ಕಾಗಿ ಕೃಷಿ ಇಲಾಖೆಗೆ ಸಂಪರ್ಕ ಮಾಡಿದ್ದು ಕೆಲವು ತಾಲೂಕುಗಳಲ್ಲಿ ನೆಲಗಲಡೆ, ತೊಗರಿ ವಿತರಿಸುವ ಕಾರ್ಯ ನಡೆದಿದೆ. ಆದರೆ ರೈತರ
ಬೇಡಿಕೆಗೆ ತಕ್ಕಂತೆ ಜಿಲ್ಲೆಗೆ ಅವಶ್ಯ ಕವಾದ ಬಿತ್ತನೆ ಬೀಜಗಳು, ರಸಗೊಬ್ಬರ ಪೂರೈಕೆ ಆಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಸರ್ಕಾರವು ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಒದಗಿಸಿ ರೈತರ ಆತಂಕ ದೂರ ಮಾಡ ಬೇಕಾಗಿದೆ. ಕಳೆದ ಸಲ ಬಾಗೇಪಲ್ಲಿ ತಾಲೂಕಿನಲ್ಲಿ ಮುಂಗಾರು ಮುಗಿದು ಹಿಂಗಾರಿನ ಸಮಯದಲ್ಲಿ ನೆಲಗಡಲೆ ಹಂಚಿಕೆಯಾಗಿತ್ತು. ಇದರಿಂದ ಬಹಳಷ್ಟು ರೈತರಿಗೆ ತೊಂದರೆಯಾಗಿತ್ತು.
● ಮಾಡಪ್ಪಲ್ಲಿ ನರಸಿಂಹಮೂರ್ತಿ, ಯುವ ರೈತ

● ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next