Advertisement

ವಿವಾದಿತ ಭೂಮಿ ಅಖಾಡದ್ದಾಗಿರಲಿಲ್ಲ

12:54 AM Sep 12, 2019 | Team Udayavani |

ನವದೆಹಲಿ: ವಿವಾದಿತ ರಾಮ ಜನ್ಮಭೂಮಿಯು ಎಂದಿಗೂ ನಿರ್ಮೋಹಿ ಅಖಾಡಕ್ಕೆ ಸಂಬಂಧಿಸಿರಲಿಲ್ಲ. ಟ್ರಸ್ಟ್‌ ರೂಪದಲ್ಲಾಗಲೀ ಅಥವಾ ಭಕ್ತರು ಎಂಬ ಕಾರಣಕ್ಕಾಗಲೀ ಅಖಾಡ ಯಾವುದೇ ರೀತಿಯ ಮಾಲೀಕತ್ವವನ್ನು ಹೊಂದಿರಲಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಮುಸ್ಲಿಂ ಮಂಡಳಿಗಳು ವಾದಿಸಿವೆ.

Advertisement

ಅಯೋಧ್ಯೆ ಕುರಿತ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು 21ನೇ ದಿನದ ವಿಚಾರಣೆಯನ್ನು ಆಲಿಸಿತು. ಮುಸ್ಲಿಂ ಮಂಡಳಿಗಳ ಪರ ವಾದ ಮಂಡಿಸಿದ ರಾಜೀವ್‌ ಧವನ್‌, ನಿರ್ಮೋಹಿ ಅಖಾಡವು ತನ್ನ ಹಕ್ಕನ್ನು 1959ರಲ್ಲಿ ಪ್ರಸ್ತಾಪಿಸಿ ದೂರು ದಾಖಲಿಸಿದ್ದು, ಇದು ದಾವೆ ಸಲ್ಲಿಸಲು ನೀಡಲಾಗಿದ್ದ ನಿಯಮಿತ ಕಾಲಾವಧಿಯನ್ನು ಮೀರಿದೆ ಎಂದಿದ್ದಾರೆ.

1950ರಲ್ಲಿ ಸರ್ಕಾರ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಮೂಲ ವಾರಸುದಾರರಿಗೆ ಅರ್ಜಿ ಸಲ್ಲಿಸಲು ಮೂರು ವರ್ಷ ಕಾಲಾವಕಾಶ ನೀಡಿತ್ತು. ಆದರೆ ಅಖಾಡ 1959ರಲ್ಲಿ ಅರ್ಜಿ ಸಲ್ಲಿಸಿದೆ ಎಂದು ಅವರು ವಾದಿಸಿದ್ದಾರೆ. ಆದರೆ ವಿವಾದಿತ 2.77 ಎಕರೆ ಭೂಮಿಯಲ್ಲಿ ಅಖಾಡಕ್ಕೆ ಮೂರನೇ ಒಂದು ಭಾಗವನ್ನು ಅಲಹಾಬಾದ್‌ ಹೈಕೋರ್ಟ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next